ಭಾನುವಾರ, ನವೆಂಬರ್ 14, 2021

ನಂಬಿಕೆ (ಕವಿತೆ) - ವಾಣಿ ಮಹೇಶ್, ಹಾಸನ.

ನಂಬಿಕೆಯು ಕಳೆದು ಹೋಗಿದೆ
ಅಂಬಿಗನ ಕೈಯಲ್ಲಿನ ಹುಟ್ಟು ಜಾರಿ ಹೋದಂತೆ
ಅಭಿಸಾರಿಕೆಯ ಸೆರಗು ಜಾರಿದಂದೇ..//
 ತೋಳಗಳ ಹಿಂಡು ಕುರಿಯನೊಂದು
ಬಲಿ ತೆಗೆದುಕೊಂಡಂತೆ
ಸೂರ್ಯನ ತಾಪ ಮೇರೆ ಮೀರಿದಂತೆ //

ಹಚ್ಚ ಹಸಿರು ತುಂಬಿ ಕಂಗೊಳಿಸಿದ ಭೂರಮೆ
ಕಡು ಪಾಪಿಯ ಸ್ಪರ್ಷದಿಂದ 
ಮುದುರಿ ಹೋದಂತೆ
ಚಂದಿರನ ಹೊಂಬೆಳಕು ಮೋಡಗಳಿಂದ
ಮುಚ್ಚಿ ಹೋದಂತೆ //

ಸಾಗರ ಗರ್ಭದೊಳಗಡಗಿದ
ಮೃತ್ಯುದೇವತೆ ಬಳಿಸಾರಿದಂತೆ
ನಂಬಿಕೆ ಕಳೆದು ಹೋಗಿದೆ..//

ಸಂಬಂಧಗಳು ಸೊರಗಿದಂತೆ
ಸಂಪರ್ಕಗಳು ಕಡಿದಂತೆ
ನಂಬಿಕೆ ಕಳೆದು ಹೋಗಿದೆ
ಸುಂದರ ಬದುಕ ಕಂಡೇವೆಂಬ 
ಭ್ರಮೆಯ ತೊರೆದು ವಾಸ್ತವ
ಅರಿತು ಅದರೊಡನೆ ಸಾಗಬೇಕಿದೆ
ಕಳೆದ ಬದುಕ ನೆನೆದು //
- ವಾಣಿ ಮಹೇಶ್, ಹಾಸನ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...