ಕರುನಾಡ ಕುಡಿಗಳೆಲ್ಲ, ಒಂದಾಗಿ ಬನ್ನಿ.
ತಾಯಿ ಭುವನೇಶ್ವರಿಯ,ನಮಿಸುವ ಬನ್ನಿ.
ಕನ್ನಡದ ಬಾವುಟವ, ಹಾರಿಸುವ ಬನ್ನಿ.
ಕನ್ನಡಾಂಬೆಯ, ಕೀರ್ತಿ ಜಗವ, ತುಂಬುವ ಬನ್ನಿ.
ಅಂಧಕಾರ, ಅಹಂಕಾರ, ಅಳುಸುವ ಬನ್ನಿ.
ಅನ್ಯಾಯ, ಅಧರ್ಮ, ಮರ್ದಿಸುವ ಬನ್ನಿ.
ಕಾಮ -ಕ್ರೋದ, ಮದ -ಮತ್ಸರ, ಸಂಹರಿಸುವ ಬನ್ನಿ.
ಧೀನರ, ಬಾಳಲ್ಲಿ ಬೆಳಕಾಗುವ ಬನ್ನಿ.
ಸಂತ-ಶರಣ, ಪಕೀರರ ಕನಸು, ನನಸಾಗಿಸುವ ಬನ್ನಿ.
ಜ್ಞಾನಿ - ವಿಜ್ಞಾನಿಗಳ, ಆಶಯ ವೃದ್ಧಿಸುವ, ಬನ್ನಿ.
ಆದಿ, ನವ್ಯ, ಕವಿ -ಪುಂಗವರ, ಪಥದಲ್ಲಿ ಸಾಗುವ,ಬನ್ನಿ.
ಜಾತಿ, ಮತ, ಭೇದವನ್ನು ಹೊಡೆದಾಕುವ, ಬನ್ನಿ.
ಅನ್ಯ ಭಾಷ, ಮೋಹಿಗಳ ಏಳೆದು, ತರುವ ಬನ್ನಿ.
ಅನುದಿನವು ಕನ್ನಡವ, ಬೆಳೆಸುವ ಬನ್ನಿ.
ಅನುಕ್ಷಣವು ಕನ್ನಡವ, ಕಲಿಸುವ ಬನ್ನಿ.
ಅನುಗಾಲವು ಕನ್ನಡವ, ಸ್ಥಿರ ಗೊಳಿಸುವ ಬನ್ನಿ.
- ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ.
ಮೋ :9740499814.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಧನ್ಯವಾದಗಳು ಸರ್
ಪ್ರತ್ಯುತ್ತರಅಳಿಸಿ👌👍👌
ಪ್ರತ್ಯುತ್ತರಅಳಿಸಿ