ಶುಕ್ರವಾರ, ಆಗಸ್ಟ್ 29, 2025

ಬೆಳಗು...

ಕವನ
    ಬೆಳಗು
ಬೆಳಗು ಬಾ ಬೆಳಕು
ಬೆಳದಿಂಗಳ ಬೆಳಕು ಚೆಲ್ಲುತ
ರಂಗು ರಂಗಿನ ಕಾಮನಬಿಲ್ಲಿನಂತೆ
ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ
ರಂಗು ರಂಗಿನ ರಂಗೋಲಿಯಂತೆ
ನೆನಪಿನಂಗಳದಿ ನಗು ನಗುತ
ನೀ ಬೆಳಗು ಬಾ ಬೆಳಕು... 
ಈ ಬಾಳ್ ಕತ್ತಲೆಯ ಬದುಕು 
ಹೊಸ ಜ್ಯೋತಿಯ ಹೊಂಬೆಳಕಲಿ 
ಸೂರ್ಯನ ಬೆಳಕು ಚೆಲ್ಲುತ 
ದ್ಯಿವ ಜ್ಯೋತಿಯ ಉದಯಿಸುತ 
ಬೆಳಗು ಬಾ ಬೆಳಕು...

        - ವಿ.ಎಂ.ಎಸ್.ಗೋಪಿ ✍️
         ಲೇಖಕರು, ಸಾಹಿತಿಗಳು
                 ಬೆಂಗಳೂರು.

ವಿಧ್ಯಾಪತಿ ವಿನಾಯಕ ...

.....ವಿದ್ಯಾಪತಿ ವಿನಾಯಕ.... 

ಭಾದ್ರಪದ ಮಾಸದ ಗಣೇಶ ಚೌತಿಯು 
ಸಿದ್ಧಿ ವಿನಾಯಕನಿಗೆ ವಾಹನ ಚಿಕ್ಕ ಇಲಿಯು 
ಬಹಳ ಪ್ರಸಿದ್ಧಿ ಕ್ಷಿಪ್ರ ಪ್ರಸಾದನ ಬುದ್ಧಿವಂತಿಕೆಯು 
ದೇವರಿಂದ ಜನ್ಮ ಪಡೆದ ನಮ್ಮ ವಿಶ್ವಮುಖನು

ಶಿವ ಪಾರ್ವತಿಯರ ಪ್ರೀತಿಯ ಸ್ಕಂದಪೂರ್ವಜನು
ವಿದ್ಯೆಗಿವನೇ ಭೂಷಣ ನಮ್ಮ ಗಜಮುಖನು 
ನಿನ್ನ ಪೂಜಿಸಿದೊಡೆ ಗಾನಪತ್ಯನಾದೆ ನಾನು 
ಸದಾ ಕಾಪಾಡುವ ದೇವಲೋಕದ ದೈವ ನೀನು 

ಮತ್ತೆ ಬಂದಿದೆ ಸಡಗರದ ಯಜ್ಞಕಾಯನ ಉತ್ಸವವು 
ತುಂಬಿದೆ ಹರ್ಷ ಭೂಮಿಯ ತುಂಬೆಲ್ಲವು 
ನಿತ್ಯ ಕಡಬು ಹೋಳಿಗೆಯ ನೈವೇದ್ಯವು 
ಸ್ಥಾಪಿಸಿ ಮಣ್ಣಿನ ಗಣಪತಿಯ ಪೂಜಿಸೋಣ ನಾವು ನೀವು 

ಸಿಡಿಸದಿರಿ ಜೋರಾಗಿ ಎಲ್ಲೆಡೆ ಪಟಾಕಿಗಳನ್ನು 
ಗೊತ್ತಿದ್ದರೂ ನಾಶಮಾಡಬೇಡಿ ಪ್ರಕೃತಿಯ ಸೊಬಗನ್ನು 
ಮಹಾ ಗಣಪತಿಯ ವಿಸರ್ಜನೆಯಲಿ ಮರೆಯದಿರಿ ಪ್ರತಿಜ್ಞೆಯನ್ನು 
ನಿರ್ವಿಘ್ನತಾ ಸಿದ್ಧಿಗಾಗಿ ಮೊದಲ ಪೂಜೆ ದೇವಾ ನಿಮಗಿನ್ನು

ಸಕಲ ಕಾರ್ಯಗಳಿಗೂ ಮುಂದಿರುವ ಸಿದ್ಧಿವಿನಾಯಕನೇ 
ನಂಬಿದ ಪಾಲಿನ ಭಕ್ತರ ಕೈ ಬಿಡದ ಮೂಷಿಕವಾಹನನೇ 
ಭೂಮಿಯ ಮೇಲಿನ ಎಲ್ಲರ ಕಷ್ಟ ನಿವಾರಿಸುವ ವಕ್ರತುಂಡನೇ 
ಭೂಲೋಕದ ಉದ್ಧಾರಕ್ಕಾಗಿ ಜನಿಸಿದ ಲಂಬೋದರನೇ

ಏಕದಂತ ಬಂದು ನಮಗೆಲ್ಲ ಹರ್ಷವ ತಂದನು 
ನಲಿಯುತ ಕುಣಿಯುತ ನಾನಾವೇಷದಿ ಬಂದನು 
ಗರಿಕೆಯ ಹುಲ್ಲಿನಲಿ ಸಕಲರ ಪ್ರೀತಿಯ ಕಂಡನು 
ಬೇಡಿದ ವರವನು ಭಕ್ತರಿಗೆ ದಯಪಾಲಿಸಿಹನು 
ಶ್ರೀ ಮುತ್ತು ಯ ವಡ್ಡರ
ಶಿಕ್ಷಕರು 
ಬಾಗಲಕೋಟ 
9845568484

ಶನಿವಾರ, ಆಗಸ್ಟ್ 23, 2025

ಗಣೇಶ ಚತುರ್ಥಿ...


ಗೌರಿ ಗಣೇಶ ಹಬ್ಬದ ಸಡಗರ ಸಂಭ್ರಮ. ಗಣೇಶೋತ್ಸವ ಸಮಾರಂಭಗಳು ನಗರಗಳು ಸೇರಿದಂತೆ ಪ್ರತಿ ರಾಜ್ಯದ ಎಲ್ಲ ಹಳ್ಳಿ ಹಳ್ಳಿಗಳಲ್ಲಿ ಮನೆಗಳಲ್ಲಿ ಮನೆಯ ಅಂಗಳದ ಬೀದಿಗಳಲ್ಲಿ ಗಣೇಶ ಹಬ್ಬ ಆಚರಿಸುತ್ತಾರೆ. ಗಣೇಶೋತ್ಸವಗಳು ಅತೀ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶ ಚತುರ್ಥಿಗೆ ತನ್ನದೇ ಆದ ವೈಶಿಷ್ಟವಿದೆ. ಭಾದ್ರಪದ ಮಾಸ ಶುಕ್ಲ ಪಕ್ಷ ಚತುರ್ಥಿಯಂದು ಮಾಡುವ ಗಣೇಶನ ಹಬ್ಬ ಒಂದು ರೀತಿಯಲ್ಲಿ ವಿನಾಯಕನ ಹುಟ್ಟು ಹಬ್ಬವೆಂದೇ ಹೇಳಬಹುದು. ಗಣೇಶನ ಹಬ್ಬವನ್ನು ದೇಶದಾದ್ಯಂತ ಆಚರಿಸುತ್ತಾರೆ, ಜಾತಿ ಮತ ಭೇದವಿಲ್ಲದೇ ಶ್ರೀ ಗಣೇಶವನ್ನು ವೈಭವದಿಂದ 5 ದಿನಗಳವರೆಗೆ ಪೂಜಿಸುತ್ತಾರೆ. ಕೆಲವರು ಒಂದೇ ದಿನ ಪೂಜಿಸುತ್ತಾರೆ. ಗಣೇಶನ ಪೂಜೆಯ ಮೊದಲ ದಿನವೆ ಗೌರಿಪೂಜೆ ಮಾಡುತ್ತಾರೆ. ದೇಶದಲ್ಲೇ ಅತಿ ಹೆಚ್ಚು ವೈಭವದಿಂದ ಗಣೇಶಹಬ್ಬ ಆಚರಿಸುವ ಮಹಾರಾಷ್ಟ್ರ, ಗೋವಾ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ಪ್ರತಿಯೊಂದು ಮನೆ ಮನೆಯಂಗಳದಲ್ಲಿ ಗಣಪತಿಯ ಮೂರ್ತಿಯನ್ನು ತಂದು ಒಂದು ದಿನ, ಮೂರು, ಐದು, ಏಳು ಹನ್ನೊಂದು ಹಾಗು ಇಪ್ಪತ್ತೊಂದು ದಿನಗಳವರೆಗೆ ಪೂಜಿಸಿ, ಆರಾಧಿಸುತ್ತಾರೆ. ಮನೆಯಲ್ಲಿ ಯಾವುದೇ ಒಂದು ಶುಭ ಸಮಾರಂಭ ನಡೆಯುವ ಸಂದರ್ಭದಲ್ಲಿ ಶುಭ ಸಮಾರಂಭ ಆರಂಭವಾಗುವುದೇ ಗಣೇಶನ ಪೂಜೆಯಿಂದ ಗಣಪತಿಯನ್ನು ವಿಘ್ನನಿವಾರಕ ಎನ್ನುತ್ತಾರೆ. ನಾವು ಮಾಡುವಂತಹ ಕೆಲಸವು ಯಾವುದೇ ತೊಂದರೆಯಿಲ್ಲದೇ ಶೀಘ್ರವಾಗಿ ಪೂರ್ಣವಾಗಲಿ ಎಂದು ವಿನಾಯಕನಿಗೆ ಪೂಜೆ ಮಾಡುತ್ತೇವೆ. ಗಣೇಶ ಏಕದಂತ, ಮಂಗಳಮೂರ್ತಿ ವಿಘ್ನೇಶ್ವರ, ಲಂಬೋದರ, ವಿನಾಯಕ ಗಜಮುಖ ಮೋಷಿಕವಾಹಕ, ಮೋದಕ ಪ್ರಿಯ, ಪಿಲೈಯಾರ್, ಮುಂತಾದ ಅನೇಕ ಹೆಸರುಗಳಿವೆ. ವಿಘ್ನಗಳನ್ನು ವಿನಾಶ ಮಾಡುವುದರಿಂದ ವಿಘ್ನೇಶ್ವರ ಎಂದು ಕರೆಯುತ್ತೇವೆ. ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಮುಂತಾದ ಪೂಜ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು ಕಾಗದ ಪ್ಲಾಸ್ಚಿಕ್ ನಿಂದ ಮಾಡಲಾದ ವಸ್ತುಗಳನ್ನು ಮುಂತಾದವುಗಳನ್ನು ತೆಗೆಯಬೇಕು. ವಿಸರ್ಜನೆ ಮಾಡುವ ಗಣೇಶನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ನೀರು ಪವಿತ್ರವಾಗುತ್ತದೆ. ಕೆರೆ ಮತ್ತು ಸಮುದ್ರದ ನೀರಿನಲ್ಲಿ ಮಣ್ಣಿನ ಗಣೇಶ ವಿಗ್ರಹಗಳನ್ನು ಮಾತ್ರ ನೀರಿನಲ್ಲಿ ವಿಸರ್ಜನೆ ಮಾಡಬೇಕು. ಪ್ಲಾಸ್ಟಿಕ್ ವಸ್ತುಗಳು ಮರ ಮತ್ತು ಬಿದಿರು ಕಡ್ಡಿಗಳು ಕಸ ವಿಲೇವಾರಿ ಸ್ಥಳಗಳಿಗೆ ನೀಡಬೇಕು. ನಮ್ಮ ಸುತ್ತಮುತ್ತ ಇರುವ ಪರಿಸರ ನಾವು ಕಾಪಡಬೇಕು. ಈ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಮಣ್ಣಿನಿಂದ ಮಾಡಿದ ಗಣಪತಿಗಳನ್ನು ನಮ್ಮ ನಮ್ಮ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿ ಆಚರಿಸೋಣ. 

ಗಣೇಶ ಹಬ್ಬಕ್ಕೆ ವಿವಿಧ ಬಗೆಯ ಕಜ್ಜಾಯ.
 ಕುಚ್ಚಲಕ್ಕಿ ಕಜ್ಜಾಯ :
 ಕುಚ್ಚಲಕ್ಕಿ, ಬೆಲ್ಲ, ಕಾಯಿತುರಿ ತಲಾ ಒಂದು ಕಪ್, ಏಲಕ್ಕಿಪುಡಿ ಒಂದು ಚಮಚ. 
ವಿಧಾನ : ಕುಚ್ಚಲಕ್ಕಿಯನ್ನು ಪಟಪಟ ಸಿಡಿಯುವ ತನಕ ಹುರಿಯಿರಿ. ಅನಂತರ ತರಿತರಿಯಾಗಿ ಬೀಸಿ ಅಥಾವ ಮಿಕ್ಸಿಗೆ ಹಾಕಿಕೊಳ್ಳಿ, ಬೆಲ್ಲ ಕಾಯಿತುರಿ ಏಲಕ್ಕಿ ಮಿಶ್ರಣಕ್ಕೆ ಅಕ್ಕಿಯ ತರಿಯನ್ನು ಬೆರಸಿ. 
ಕಪ್ಪು ಎಳ್ಳು ಕಜಾಯ :
ಕಪ್ಪು ಎಳ್ಳು, ಬೆಲ್ಲ ತುರಿದ ಕಾಯಿತುರಿ ತಲಾ ಒಂದು ಕಪ್. 
ವಿಧಾನ : ಕಪ್ಪು ಎಳ್ಳನ್ನು ಪಟಪಟ ಸಿಡಿಯುವ ತನಕ ಹುರಿಯಿರಿ. ಅನಂತರ ಅದನ್ನು ಅಗಲವಾದ ಪಾತ್ರೆಯಲ್ಲಿ ಅಥಾವ ಮೊರಕ್ಕೆ ಹಾಕಿ ಕೈಯಿಂದ ಮೆಲ್ಲನೆ ತಿಕ್ಕಿ. ಆಗ ಅದರ ಸಿಪ್ಪೆ ಬೇರೆಯಾಗುತ್ತದೆ. ಹೀಗೆ ಆರಿಸಿದ ಬಳಿಕ ಅದಕ್ಕೆ ಬೆಲ್ಲ ಹುರಿದಕಾಯಿತುರಿ, ಕಡಲೇಬೀಜ ಏಲಕ್ಕಿ ಹಾಕಿ ಕಲಸಿ. 

             - ವಿ.ಎಂ.ಎಸ್.ಗೋಪಿ ✍
               ಲೇಖಕರು, ಸಾಹಿತಿಗಳು
                   ಬೆಂಗಳೂರು.

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...