ಶುಕ್ರವಾರ, ಆಗಸ್ಟ್ 15, 2025

ಕವಿತೆ

ಅಲ್ಲೊಬ್ಬ....
ಹೂ ರಾಶಿಯ ಜೋಳಿಗೆ ಹೊತ್ತು
ಹೂ ಮಾರುತಿದ್ದ;

ಅವನಲ್ಲಿ 
'ಪ್ರೇಮ'ದ ಸಂಕೇತವಾದ
ಗುಲಾಬಿಯೂ ಇತ್ತು!
ಪರಿಮಳ ಸೂಸುವ
ಮಲ್ಲಿಗೆಯೂ ಇತ್ತು!

ಕೊಳ್ಳಲು ಹೋದ ನಾನು 
ನನ್ನ 'ಹೂ'ಮನವನ್ನೆ
ಅವನಿಗೆ ಅರ್ಪಿಸಿಬಂದೆ!

ಕಾರಣ ಅವನು 
ಹೂಮಾರುವ ವೇಷದಲಿದ್ದ
ನನ್ನ ಇನಿಯನೇ ಆಗಿದ್ದ!
ಡಿ.ಶಬ್ರಿನಾ ಮಹಮದ್ ಅಲಿ,ಚಳ್ಳಕೆರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...