ಶುಕ್ರವಾರ, ಆಗಸ್ಟ್ 29, 2025

ವಿಧ್ಯಾಪತಿ ವಿನಾಯಕ ...

.....ವಿದ್ಯಾಪತಿ ವಿನಾಯಕ.... 

ಭಾದ್ರಪದ ಮಾಸದ ಗಣೇಶ ಚೌತಿಯು 
ಸಿದ್ಧಿ ವಿನಾಯಕನಿಗೆ ವಾಹನ ಚಿಕ್ಕ ಇಲಿಯು 
ಬಹಳ ಪ್ರಸಿದ್ಧಿ ಕ್ಷಿಪ್ರ ಪ್ರಸಾದನ ಬುದ್ಧಿವಂತಿಕೆಯು 
ದೇವರಿಂದ ಜನ್ಮ ಪಡೆದ ನಮ್ಮ ವಿಶ್ವಮುಖನು

ಶಿವ ಪಾರ್ವತಿಯರ ಪ್ರೀತಿಯ ಸ್ಕಂದಪೂರ್ವಜನು
ವಿದ್ಯೆಗಿವನೇ ಭೂಷಣ ನಮ್ಮ ಗಜಮುಖನು 
ನಿನ್ನ ಪೂಜಿಸಿದೊಡೆ ಗಾನಪತ್ಯನಾದೆ ನಾನು 
ಸದಾ ಕಾಪಾಡುವ ದೇವಲೋಕದ ದೈವ ನೀನು 

ಮತ್ತೆ ಬಂದಿದೆ ಸಡಗರದ ಯಜ್ಞಕಾಯನ ಉತ್ಸವವು 
ತುಂಬಿದೆ ಹರ್ಷ ಭೂಮಿಯ ತುಂಬೆಲ್ಲವು 
ನಿತ್ಯ ಕಡಬು ಹೋಳಿಗೆಯ ನೈವೇದ್ಯವು 
ಸ್ಥಾಪಿಸಿ ಮಣ್ಣಿನ ಗಣಪತಿಯ ಪೂಜಿಸೋಣ ನಾವು ನೀವು 

ಸಿಡಿಸದಿರಿ ಜೋರಾಗಿ ಎಲ್ಲೆಡೆ ಪಟಾಕಿಗಳನ್ನು 
ಗೊತ್ತಿದ್ದರೂ ನಾಶಮಾಡಬೇಡಿ ಪ್ರಕೃತಿಯ ಸೊಬಗನ್ನು 
ಮಹಾ ಗಣಪತಿಯ ವಿಸರ್ಜನೆಯಲಿ ಮರೆಯದಿರಿ ಪ್ರತಿಜ್ಞೆಯನ್ನು 
ನಿರ್ವಿಘ್ನತಾ ಸಿದ್ಧಿಗಾಗಿ ಮೊದಲ ಪೂಜೆ ದೇವಾ ನಿಮಗಿನ್ನು

ಸಕಲ ಕಾರ್ಯಗಳಿಗೂ ಮುಂದಿರುವ ಸಿದ್ಧಿವಿನಾಯಕನೇ 
ನಂಬಿದ ಪಾಲಿನ ಭಕ್ತರ ಕೈ ಬಿಡದ ಮೂಷಿಕವಾಹನನೇ 
ಭೂಮಿಯ ಮೇಲಿನ ಎಲ್ಲರ ಕಷ್ಟ ನಿವಾರಿಸುವ ವಕ್ರತುಂಡನೇ 
ಭೂಲೋಕದ ಉದ್ಧಾರಕ್ಕಾಗಿ ಜನಿಸಿದ ಲಂಬೋದರನೇ

ಏಕದಂತ ಬಂದು ನಮಗೆಲ್ಲ ಹರ್ಷವ ತಂದನು 
ನಲಿಯುತ ಕುಣಿಯುತ ನಾನಾವೇಷದಿ ಬಂದನು 
ಗರಿಕೆಯ ಹುಲ್ಲಿನಲಿ ಸಕಲರ ಪ್ರೀತಿಯ ಕಂಡನು 
ಬೇಡಿದ ವರವನು ಭಕ್ತರಿಗೆ ದಯಪಾಲಿಸಿಹನು 
ಶ್ರೀ ಮುತ್ತು ಯ ವಡ್ಡರ
ಶಿಕ್ಷಕರು 
ಬಾಗಲಕೋಟ 
9845568484

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...