ಮಂಗಳವಾರ, ಸೆಪ್ಟೆಂಬರ್ 28, 2021

ಸ್ವತಂತ್ರವಿಲ್ಲದ ಬದುಕು (ಕವಿತೆ) - ಶ್ರೀಮತಿ ಸೂಗಮ್ಮ ಡಿ ಪಾಟೀಲ್ಉತ್ನಾಳ್ (ಬಿಜಾಪುರ).

ಸ್ವತಂತ್ರವಿಲ್ಲದ ಬದುಕು

ಹೆಣ್ಣಿಗೇ ಎಲ್ಲಿಹದು ಹೇಳಿ  ಸ್ವತಂತ್ರ 
ಬಡವನ  ಮನೆಯಲ್ಲಿ ಹೆಣ್ಣಾಗಿ ಹುಟ್ಟೋದೇ  ಅತಂತ್ರ
ಸ್ತ್ರೀ ಎಂಬ   ಕಾರಣಕೆ ತಂದೆಯ ಮನೆಯಲ್ಲಿಯೂ ಪರತಂತ್ರ//

ಅತ್ತೆಯ ಮನಿಯಲಿ ಅವಳ   ಅಡಿಯಾಳಗಿ ಬಾಳುವ ಷಡ್ಯಂತ್ರ
ಎದುರಾಗಿ ಮಾತಾಡಿದರೆ ಸಂಸ್ಕಾರವಿಲ್ಲದವಳು  ಅನ್ನೋ ಮಂತ್ರ //

ಕೂತರು ನಿಂತರು ಕೊಂಕಾಡುವರೇ ನಮ್ಮ ಹತ್ರ   
ಎಷ್ಟು ಸೋತು ನಡೆದರು ಕರುಣೆ ಇಲ್ಲ ಇವರತ್ರ 
ಹೆಣ್ಣು ಎಂಬ ತಾತ್ಸಾರವೇ ಇಂದಿಗೂ ಪ್ರೀತಿಗೆ ಕತ್ರಿ//

ಮಗಳೆಂಬ ಭಾವ ಇಹುದು  ಜನರೆದುರು ಮಾತ್ರ 
ಅತ್ತೆ ಎಂಬ ಗರ್ವ ಹೋಗದು ಇದೇ ಬಾಳಿನ ತಂತ್ರ //

ಸೊಸೆ ಎಂದ್ರೆ ಮಗನ ಕಿತ್ತುಕೊಂಡವಳೆಂಬ ಖಳನಾಯಕಿ ಪಾತ್ರ
ಸುತನೆಂದರೆ ಹೆಂಡತಿ ಗುಲಾಮನೆಂದು ಅತ್ತೆ ಕೊಟ್ಟ  ಪ್ರಮಾಣ ಪತ್ರ //

ತವರ ತೊರೆದು ನಿಮ್ಮ ನಂಬಿ ಬಂದಿಹ ಹೆಣ್ಣಿಗೇ ಎಲ್ಲಿದೆ ಪ್ರೀತಿ
ಇದೇ ಅಲ್ಲವೇ ಇಂದು ಅಸ್ತಿತ್ವವಿರುವ ಅವಿಭಕ್ತ ಕುಟುಂಬದ ರೀತಿ //
- ಶ್ರೀಮತಿ ಸೂಗಮ್ಮ ಡಿ ಪಾಟೀಲ್
ಉತ್ನಾಳ್ (ಬಿಜಾಪುರ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...