ಶುಕ್ರವಾರ, ಸೆಪ್ಟೆಂಬರ್ 24, 2021

ಕೈ ತುಂಬ ಹೂ (ಕವಿತೆ) - ವೆಂಕಟೇಶ್ ಬಡಿಗೇರ್ ಕಮಲಾಪುರ - ಹಂಪಿ.


 ಕೈತುಂಬ ಹೂ

ಹಳೆಯ ನಾನು ಗೆಳೆಯ ನೀನು
ಹಂಪೆಯ ಕುವರರು ನಾವು
ಗುರುಸಿದ್ಧರ ಸಮಾಗಮ
ಹಂಪೆಯ ವೆಂಕ. ಭಾಷಾ
  ಸಿದ್ದು ಅರುಣಾ ಬಸಪ್ಪ
ಇರುತಿರಲು  ನೆಮ್ಮದಿಗಿಲ್ಲ ಸುಂಕ.

ಮೈಕೊಡವಿ ನಿಂತೈತಿ ಗೂಳಿಯಂತೆ
ರಾಯರ ಒಲುಮೆಯ ಪ್ರೀತಿಯ ಗೂಳಿ
ಒಲುಮೆಗೆ ತಲೆತೂಗೈತಿ
ಕೈ ತುಂಬ ಹೂ ಕೊಟ್ಟೈತಿ

ಮನದ ಕನ್ನಡಿಯಲಿ
ಸುವರ್ಣಾಕ್ಷರ ಬರದೈತಿ
ಗುರುರಾಯ ರಾಘವೇಂದ್ರ
ಹಂಪೆ ವಿರುಪಾಕ್ಷ
ರಾಯರ ಕರುಣೆಯ ದೀಪ
ನಂದಾದೀಪ

ಶಿವ ಪಾರ್ವತಿಯಂತೆ  ಹಣತೆಗಳು
ಶುಭಕೋರುತ್ತಿವೆ ತೃಪ್ತಭಾವಗಳು
ಎಲ್ಲರ ಮನದಲಿ ಸ್ನೇಹದಾ ಹಣತೆ ಹಚ್ಚಿದ ಸಿದ್ಧ 
ನೋವು ಕಷ್ಟ ನುಂಗಿ
 ಮೂಡಿದ ದೈವ ವೀಣೆಯ ಮಿಡಿದವ
 ಮುಖದಲಿ ನಗೆಯ ಮೀಸಿ ತೀಡಿದವ
ಇವನಾರವ ಇವನಾರವ ಇವ ನಮ್ಮವ
ಇವ ಹಂಪೆಯ ಕೂಸಲ್ಲವೇ?
 ಸೊಲ್ಲ ಮಾತಾಡದಿರು ಗಾವಲಿಗರೇ?
ಇಹಪರ ಮುಕ್ತಿಗೆ ಹಾಲಿನ ತೊರೆ ಆಗೋಣ॥.

- ವೆಂಕಟೇಶ್ ಬಡಿಗೇರ್ ಕಮಲಾಪುರ - ಹಂಪಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...