ಮಂಗಳವಾರ, ಜನವರಿ 3, 2023

ತರ ತಮ(ಕವಿತೆ) - ಮಾಲತಿ ಮೇಲ್ಕೋಟೆ.

ನೂತನ ಸಾಹಿತಿಯೋರ್ವರು
ಬರೆದಿಹರು ಹಲವಾರು
ದೊಡ್ಡಸಮಾರಂಭವೊಂದಕೆ 
ಆಗಿಹರು ಆಹ್ವಾನಿತರು

ಬಾಗಿಲ ಬಳಿ ಚೌಕಿದಾರ
ಆಹ್ವಾನವಿದೆಯೇ ಪ್ರಶ್ನಿಸಿದ
ಹೌದೆಂದು ಗೋಣಾಡಿಸಿದರು
ಪ್ರವೇಶ ದೊರೆಯಿತು ಒಳಗೆ

ಸುತ್ತೆಲ್ಲ ಕಣ್ಣಾಡಿಸಿದರು
ತುಂಬಿದ ಸಭಾಸದರು
ಕಾಣಲಿಲ್ಲ ಆತಿಥೇಯರು
ಗೊಂದಲದಲಿ ನಿಂತರು

ಒಮ್ಮೆಗೇ ಜನರೆದ್ದು ನಿಂತರು
ಜನಪ್ರಿಯ ನಟ ಬಂದನೆಂದು
ಬಾಗಿಲತ್ತ ದೌಡಾಯಿಸಿದರು
ಸಾಹಿತಿ ಆಸನಸ್ಥರಾಗಿ ನಿಟ್ಟುಸಿರಿಟ್ಟರು.


- ಮಾಲತಿ ಮೇಲ್ಕೋಟೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...