ಸೋಮವಾರ, ಮಾರ್ಚ್ 3, 2025

ಮಧುರ ಮೌನ...

""ಮಧುರ ಮೌನ""
 ಮಧುರ ಮೌನವಿರಲು ಮಾತಿನ ಹಂಗೇಕೆ ಗೆಳೆಯ
 ಭಾವನೆಯ ತಿಳಿಯಲು ಕಣ್ಣ ಭಾಷೆ ಸಾಕಲ್ಲವೇ ಇನಿಯ

 ಹೃದಯ ತೋಟದ ಪ್ರೇಮ ಸುಮ ಸೌಗಂಧ ಬೀರದೇನು
 ಒಲವ ಪ್ರಕಟಕೆ ಮೌನ ಭಾಷೆಯ ಸಲುಗೆ ಸಾಲದೇನು

 ಕಣ್ಣೋಟವೇ ತಿಳಿಸುವುದು ಮನದ ಭಾಷೆಯ 
ತುಸು ಲಜ್ಜೆಯೇ ಅರುಹುವುದು ಹೃದಯದಾಸೆಯ 

ಸಾವಿರ ಮಾತುಗಳ ಗೊಡವೆ ಬೇಕಿಲ್ಲವಲ್ಲ 
ಒಲವ ಪಯಣದ ಸಿಹಿ ಮೌನವೇ ಹಿತವಾಗಿದೆ ನಲ್ಲ

 ಒಪ್ಪಿ ಅಪ್ಪಿದ ಮೇಲೆ ಮೌನದ ಚಿಪ್ಪು ಮುತ್ತಾದಂತೆ 
ಸ್ವಾತಿ ಹನಿಯೊಂದು ಕಡಲೊಳಗೆ ಮೌನದಿ ಬೆರೆತಂತೆ

 ಸಿಹಿ ಗಾಳಿಯಲಿ ಮೌನದಿ ತೇಲಿದ ಒಲವ ಸಂದೇಶ ಹಿತವಾಗಿದೆ
  ಎದೆಯಪ್ಪಿದ ಹೊಸ ತಲ್ಲಣಕೆ ಮನ ಮೌನದಿ ಸಹಿ ಹಾಕಿದೆ
 
 ಮಧುಮಾಲತಿ ರುದ್ರೇಶ್* ಬೇಲೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...