ವೈದ್ಯೋ ನಾರಾಯಣೋ ಹರಿ
ಇದ್ದಾನೆಂದರೆ ವೈದ್ಯರು ಊರಿನಲ್ಲಿ
ನೆಮದ್ದಿಯ ಛಾಯೆ ಮೂಡುವುದು ಪ್ರತಿ ಸೂರಿನಲ್ಲಿ
ಹೊಂದಿರುವರು ಕೈಗಳಲ್ಲಿ ಚಿಕಿತ್ಸೆಯ ಗುಣ
ತೀರಿಸಲಾದೀತೇ ಇವರ ಋಣ
ರೋಗ-ರುಜಿನ ಮಾಯಾ ಇವರ ಸ್ಪರ್ಶದಿಂದ
ಮನಸು ಕುಣಿದು- ಕುಪ್ಪಳಿಸುವುದು ಹರ್ಷದಿಂದ
ಕೃತಜ್ಞತೆ ಸಲ್ಲಿಸುವ ಇವರಿಗೆ ಬೇಗ ಬರ್ರಿ
ಇವರೇ ವೈದ್ಯೋ ನಾರಾಯಣೋ ಹರಿ
ವೈದ್ಯರು ನಮ್ಮ ಜೀವದ ಉಸಿರು
ಚಿರಕಾಲ ಚಿಗುರಲಿ ಮನದಲಿ ಹಸಿರು
ಧನ್ಯತೆಯಿಂದ ಇವರ ಸೇವೆಯ
ಸ್ಮರಿಸೋಣ
ಜಗದಗಲಕ್ಕೂ ಇವರ ಕೀರ್ತಿಯಪತಾಕೆ ಹಾರಿಸೋಣ
ವೈದ್ಯೋ ನಾರಾಯಣೋ ಹರಿ:
..
ಮೊಹಮ್ಮದ್ ಹುಮಾಯೂನ್ ಎನ್
ಮೈಸೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ವಾಟ್ಸಪ್ ಮಾತ್ರ )
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ