ಬುಧವಾರ, ಜೂನ್ 30, 2021

ವೈದ್ಯೋ ನಾರಾಯಣೋ ಹರಿಃ (ಕವಿತೆ) - ಮೊಹಮ್ಮದ್ ಹುಮಾಯೂನ್ ಎನ್.

ವೈದ್ಯೋ ನಾರಾಯಣೋ ಹರಿ

ಇದ್ದಾನೆಂದರೆ ವೈದ್ಯರು ಊರಿನಲ್ಲಿ
ನೆಮದ್ದಿಯ ಛಾಯೆ ಮೂಡುವುದು ಪ್ರತಿ ಸೂರಿನಲ್ಲಿ
ಹೊಂದಿರುವರು ಕೈಗಳಲ್ಲಿ ಚಿಕಿತ್ಸೆಯ ಗುಣ
ತೀರಿಸಲಾದೀತೇ ಇವರ ಋಣ

ರೋಗ-ರುಜಿನ ಮಾಯಾ ಇವರ ಸ್ಪರ್ಶದಿಂದ
ಮನಸು ಕುಣಿದು- ಕುಪ್ಪಳಿಸುವುದು ಹರ್ಷದಿಂದ
ಕೃತಜ್ಞತೆ ಸಲ್ಲಿಸುವ ಇವರಿಗೆ ಬೇಗ ಬರ್ರಿ
ಇವರೇ ವೈದ್ಯೋ ನಾರಾಯಣೋ ಹರಿ

ವೈದ್ಯರು ನಮ್ಮ ಜೀವದ ಉಸಿರು
ಚಿರಕಾಲ ಚಿಗುರಲಿ ಮನದಲಿ ಹಸಿರು
ಧನ್ಯತೆಯಿಂದ ಇವರ ಸೇವೆಯ
ಸ್ಮರಿಸೋಣ
ಜಗದಗಲಕ್ಕೂ ಇವರ ಕೀರ್ತಿಯಪತಾಕೆ ಹಾರಿಸೋಣ

ವೈದ್ಯೋ ನಾರಾಯಣೋ ಹರಿ:
..
ಮೊಹಮ್ಮದ್ ಹುಮಾಯೂನ್ ಎನ್
ಮೈಸೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...