ಶನಿವಾರ, ಜೂನ್ 26, 2021

ಚುಟುಕು ಕವಿತೆಗಳು - ಭರತ್ ಕುಮಾರ್ ಆರ್.

ಚುಟುಕುಗಳು

ಅಡುಗೆ ಕೆಟ್ಟರೆ ಒಂದು ದಿನದ ದು:ಖ
ಮಾತು ಕೆಟ್ಟರೆ ಒಂದು ವಾರದ ದು:ಖ
ಪ್ರೀತಿ ಕೆಟ್ಟರೆ ಒಂದು ವಷ೯ದ ದು:ಖ
ಬದುಕೆ ಕೆಟ್ಟರೆ ಇಡೀ ಜೀವನವೇ ದು:ಖ



ಗುಣ ಇಲ್ಲದಿದ್ದರೆ ರೂಪ ವ್ಯಥ೯
ಸಮಗ್ರತೆ ಇಲ್ಲ ದಿದ್ದರೆ ವಿದ್ಯೆ ವ್ಯರ್ಥ
ಉಪಯೋಗಿಸದಿದ್ದರೆ ಧನ ವ್ಯರ್ಥ 
ಹಸಿವಿಲ್ಲ ದಿದ್ದರೆ ಭೋಜನ ವ್ಯರ್ಥ
ಪೊಜೆ ಇಲ್ಲ ದಿದ್ದರೆ ಪ್ರತಿಮೆ ವ್ಯಥ೯
ಗುರು ಇಲ್ಲ ದಿದ್ದರೆ ಸಾಧನೆ ವ್ಯರ್ಥ
ನೀನನ್ನು ನೀ ಅರಿಯದಿದ್ದರೆ ಜೀವನವೇ‌ ವ್ಯರ್ಥ



 ಹುಟ್ಟಿದ ಊರನ್ನು ಮರೆಯೋಕಾಗಲ್ಲ
ತಾಯಿ ಋಣವನ್ನು ತೀರಿಸೋಕೆ ಆಗಲ್ಲ
ಬಯಸದೆ ಬಂದ ಪ್ರೀತಿನ ಬಿಡೊಕಾಗಲ್ಲ
ಜೀವಕ್ಕೆ ಜೀವವಾಗಿರೂ ನಿಮ್ಮನ್ನು
ಕಂಡಿತ ಮಿಸ್ ಮಾಡೋಕಾಗಲ್ಲ


ಭರತ್ ಕುಮಾರ್ ಆರ್
ಕೊಣನೂರು
✍️✍️✍️✍️✍️.


(ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...