ಶನಿವಾರ, ಜೂನ್ 26, 2021

ಚುಟುಕು ಕವಿತೆಗಳು - ಭರತ್ ಕುಮಾರ್ ಆರ್.

ಚುಟುಕುಗಳು

ಅಡುಗೆ ಕೆಟ್ಟರೆ ಒಂದು ದಿನದ ದು:ಖ
ಮಾತು ಕೆಟ್ಟರೆ ಒಂದು ವಾರದ ದು:ಖ
ಪ್ರೀತಿ ಕೆಟ್ಟರೆ ಒಂದು ವಷ೯ದ ದು:ಖ
ಬದುಕೆ ಕೆಟ್ಟರೆ ಇಡೀ ಜೀವನವೇ ದು:ಖ



ಗುಣ ಇಲ್ಲದಿದ್ದರೆ ರೂಪ ವ್ಯಥ೯
ಸಮಗ್ರತೆ ಇಲ್ಲ ದಿದ್ದರೆ ವಿದ್ಯೆ ವ್ಯರ್ಥ
ಉಪಯೋಗಿಸದಿದ್ದರೆ ಧನ ವ್ಯರ್ಥ 
ಹಸಿವಿಲ್ಲ ದಿದ್ದರೆ ಭೋಜನ ವ್ಯರ್ಥ
ಪೊಜೆ ಇಲ್ಲ ದಿದ್ದರೆ ಪ್ರತಿಮೆ ವ್ಯಥ೯
ಗುರು ಇಲ್ಲ ದಿದ್ದರೆ ಸಾಧನೆ ವ್ಯರ್ಥ
ನೀನನ್ನು ನೀ ಅರಿಯದಿದ್ದರೆ ಜೀವನವೇ‌ ವ್ಯರ್ಥ



 ಹುಟ್ಟಿದ ಊರನ್ನು ಮರೆಯೋಕಾಗಲ್ಲ
ತಾಯಿ ಋಣವನ್ನು ತೀರಿಸೋಕೆ ಆಗಲ್ಲ
ಬಯಸದೆ ಬಂದ ಪ್ರೀತಿನ ಬಿಡೊಕಾಗಲ್ಲ
ಜೀವಕ್ಕೆ ಜೀವವಾಗಿರೂ ನಿಮ್ಮನ್ನು
ಕಂಡಿತ ಮಿಸ್ ಮಾಡೋಕಾಗಲ್ಲ


ಭರತ್ ಕುಮಾರ್ ಆರ್
ಕೊಣನೂರು
✍️✍️✍️✍️✍️.


(ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...