*ಗೀತೆಯ ಶೀರ್ಷಿಕೆ:-ವನಸಿರಿ*
ಪುಟ್ಟ ಪುಟಾಣಿ ಮಕ್ಕಳೇ
ಬನ್ನಿರಿ ಸಂಚಾರ ಮಾಡೋಣ
ವನವನ್ನೆಲ್ಲಾ ಒಮ್ಮೆ ಸುತ್ತೋಣ
ನಮ್ಮ ಪರಿಸರವ ಅರಿಯೋಣ||
ಕಾಡೆಲ್ಲಾ ಒಮ್ಮೆ ಸುತ್ತುವಾ
ಬೆಟ್ಟ ಗುಡ್ಡಗಳ ಏರುವಾ
ನದಿ ತೊರೆಗಳ ನೋಡುವಾ
ಕಣ್ಮನ ತಣಿಸಿಕೊಳ್ಳುವಾ||
ಅಗೋ ನೋಡು ಎತ್ತರದ ಮರಗಳು
ಅಲ್ಲೆಲ್ಲಾ ಹಬ್ಬಿವೆ ಗಿಡಬಳ್ಳಿಗಳು
ಮರದಲ್ಲೆಲ್ಲಾ ತುಂಬಿವೆ ಹೂಹಣ್ಣುಗಳು
ಸ್ವಚಂದದಿ ವಿಹರಿಸಿವೆ ಕಾಡುಪ್ರಾಣಿಗಳು
ಕಾಡು ಬೆಳೆಸುವವರೆ ಭಾಗ್ಯಶಾಲಿಗಳು||
ಕಾಡಿದ್ದರೆ ಈ ನಾಡದು ಚೆನ್ನ
ನೀಡಿದೆ ಉಸಿರಿಗೆ ಶುದ್ಧಗಾಳಿಯನ್ನ
ವಿಧವಿಧ ಔಷಧ ಸಸ್ಯಗಳನ್ನ
ಸೆಳೆದು ಮೋಡವ, ಸುರಿಸಿದೆ ಮಳೆಯನ್ನ
ಎಲ್ಲೆಡೆಯಲ್ಲೂ ತಂದಿದೆ ತಂಪನ್ನ||
ಒಣಮರದಿಂದ ಕಟ್ಟಿಗೆ ಸಿಗುವುದು
ತರತರದ ಪೀಠೋಪಕರಣ ಮಾಡಬಹುದು
ಹಸಿಮರವ ಕಡಿಯದಿರೋಣ
ಹಸಿರ ಸಿರಿಯನು ಉಳಿಸೋಣ||
ಕಾಡಿದ್ದರೆ ಬರದು ನಾಡಿಗೆ ವಿಪತ್ತು
ಪ್ರಕೃತಿಯೇ ನಮ್ಮಯ ಸಂಪತ್ತು
ಬನ್ನಿರಿ ಬೆಳೆಸೋಣ ವನಸಿರಿ
ಚಂದದಿ ಬಾಳಲು ಇದೆ ಐಸಿರಿ||
*ಆನಂದಜಲ* ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ತುರುವೇಕೆರೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ಸಂಪಾದಕರು ವಿ ಮ ಸಾ ಪತ್ರಿಕೆ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ