ಸೋಮವಾರ, ಜೂನ್ 28, 2021

ವನಸಿರಿ (ಕವಿತೆ) - ಆನಂದಜಲ.

*ಗೀತೆಯ ಶೀರ್ಷಿಕೆ:-ವನಸಿರಿ*

ಪುಟ್ಟ ಪುಟಾಣಿ ಮಕ್ಕಳೇ
ಬನ್ನಿರಿ ಸಂಚಾರ ಮಾಡೋಣ
ವನವನ್ನೆಲ್ಲಾ ಒಮ್ಮೆ ಸುತ್ತೋಣ
ನಮ್ಮ ಪರಿಸರವ ಅರಿಯೋಣ||

ಕಾಡೆಲ್ಲಾ ಒಮ್ಮೆ ಸುತ್ತುವಾ
ಬೆಟ್ಟ ಗುಡ್ಡಗಳ ಏರುವಾ
ನದಿ ತೊರೆಗಳ ನೋಡುವಾ
ಕಣ್ಮನ ತಣಿಸಿಕೊಳ್ಳುವಾ||

ಅಗೋ ನೋಡು ಎತ್ತರದ ಮರಗಳು
ಅಲ್ಲೆಲ್ಲಾ ಹಬ್ಬಿವೆ ಗಿಡಬಳ್ಳಿಗಳು
ಮರದಲ್ಲೆಲ್ಲಾ ತುಂಬಿವೆ ಹೂಹಣ್ಣುಗಳು
ಸ್ವಚಂದದಿ ವಿಹರಿಸಿವೆ ಕಾಡುಪ್ರಾಣಿಗಳು
ಕಾಡು ಬೆಳೆಸುವವರೆ ಭಾಗ್ಯಶಾಲಿಗಳು||

ಕಾಡಿದ್ದರೆ ಈ ನಾಡದು ಚೆನ್ನ
ನೀಡಿದೆ ಉಸಿರಿಗೆ ಶುದ್ಧಗಾಳಿಯನ್ನ
ವಿಧವಿಧ ಔಷಧ ಸಸ್ಯಗಳನ್ನ
ಸೆಳೆದು ಮೋಡವ, ಸುರಿಸಿದೆ ಮಳೆಯನ್ನ
ಎಲ್ಲೆಡೆಯಲ್ಲೂ ತಂದಿದೆ ತಂಪನ್ನ||

ಒಣಮರದಿಂದ ಕಟ್ಟಿಗೆ ಸಿಗುವುದು
ತರತರದ ಪೀಠೋಪಕರಣ ಮಾಡಬಹುದು
ಹಸಿಮರವ ಕಡಿಯದಿರೋಣ
ಹಸಿರ ಸಿರಿಯನು ಉಳಿಸೋಣ||

ಕಾಡಿದ್ದರೆ ಬರದು ನಾಡಿಗೆ ವಿಪತ್ತು
ಪ್ರಕೃತಿಯೇ ನಮ್ಮಯ ಸಂಪತ್ತು
ಬನ್ನಿರಿ ಬೆಳೆಸೋಣ ವನಸಿರಿ
ಚಂದದಿ ಬಾಳಲು ಇದೆ ಐಸಿರಿ||

  *ಆನಂದಜಲ* ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ  ತುರುವೇಕೆರೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ಸಂಪಾದಕರು ವಿ ಮ ಸಾ ಪತ್ರಿಕೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...