ಸೋಮವಾರ, ಸೆಪ್ಟೆಂಬರ್ 20, 2021

ಗಜಲ್ ಪ್ರಕಾರಗಳು ಮತ್ತು ಆಯಾಮಗಳು ಕುರಿತ ಉಪನ್ಯಾಸ ಕಾರ್ಯಕ್ರಮ(ವರದಿ) - ತನುಶ್ರೀ ಪ್ರಕಾಶನ, ಸೂಲೇನಹಳ್ಳಿ.

ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ವತಿಯಿಂದ ಆಯೋಜಿಸಿದ್ದ ಆರನೇ ಆನ್‌ಲೈನ್ ಗಜಲ್ ಪ್ರಕಾರಗಳು ಮತ್ತು ಆಯಾಮಗಳು ಕುರಿತು ಉಪನ್ಯಾಸ ಕಾರ್ಯಕ್ರಮ
ದಿ :೨೦/೦೯ /೨೦೨೧ ರಂದು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ವತಿಯಿಂದ ಆಯೋಜಿಸಿದ್ದ ಆನ್‌ಲೈನ್ ಗಜಲ್ ಪ್ರಕಾರಗಳು ಮತ್ತು ಆಯಾಮಗಳು ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಆದರಲ್ಲಿ ಉಪನ್ಯಾಸ ನೀಡಲು ಶ್ರೀಯುತ ಜಭೀವುಲ್ಲಾ ಎಂ ಆಸದ್ ಮೊಳಕಾಲ್ಮೂರು ಗಜಲ್ ಕವಿಗಳು ತಮ್ಮ ಉಪನ್ಯಾಸದಲ್ಲಿ ಗಜಲ್ ಪ್ರಕಾರಗಳು ಎಷ್ಟು ಇವೆ ಎಂಬುದನ್ನು ಕೂಲಂಕಷವಾಗಿ ವಿಶ್ಲೇಷಣೆ ನೀಡಿ ಆದರ ಪ್ರಕಾರಗಳು ಆದ ಕಾಫಿಯಾನ, ಸೂಫಿ, ಆಜಾಧಿ, ಇನ್ನೂ ಮುಂತಾದ ಪ್ರಕಾರಗಳ ಬಗ್ಗೆ ಅರ್ಥ ಆಗುವ ಶೈಲಿಯಲ್ಲಿ ಹೇಳಿಕೊಟ್ಟರು. ಆನಂತರ ಪ್ರಾಸ್ತಾವಿಕ ನುಡಿಯಲ್ಲಿ ಎಸ್. ರಾಜುಕವಿ ಸೂಲೇನಹಳ್ಳಿ ಸಂಸ್ಥಾಪಕರು ಮಾತನಾಡಿ ನಮ್ಮ ಪ್ರಕಾಶನ ಆರಂಭ ಆಗಿ ಕಳೆದ ಆರು ತಿಂಗಳಿಂದ ಸತತ ಜ್ಞಾನಧಾರೆ ಎರೆಯುವ ವಿಚಾರಗಳನ್ನು ನುರಿತ ಸಾಹಿತಿಗಳಿಂದ ನೀಡುತ್ತಿದ್ದೇವೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜ್ಞಾನ ಒದಗಿಸುವ ಕಾರ್ಯ ಮಾಡುತ್ತೇವೆ ನಮ್ಮೊಂದಿಗೆ ನೀವು ಇರಬೇಕು ಮಿತ್ರರೇ ಎಂದು ಮಾತು ಮುಗಿಸಿದರು.

 ಸಂಸ್ಥೆಯ ರಾಜ್ಯ ಸಂಚಾಲಕರು ಆದ ಶ್ರೀಯುತ ಕೆ. ಶ್ರೀಧರ್ ಅವರು ತಮ್ಮ ನುಡಿಗಳಲ್ಲಿ  ನಮ್ಮ ಸಂಸ್ಥೆಯು ಉತ್ತಮ ಗುರಿ ಮತ್ತು ಉದ್ದೇಶಗಳು ಹೊಂದಿದೆ ತಮ್ಮೆಲ್ಲರ ಸಹಕಾರ ಮೂಲಕ ಉತ್ತಮ ಸ್ಪರ್ಧೆಯನ್ನು ಕಾರ್ಯಕ್ರಮ ನೀಡುತ್ತಾ ಬಂದಿದೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ನುಡಿದರು. ಕಾರ್ಯಕ್ರಮದ ನಿರೂಪಣೆ ಉದಯ್ ಬಡಿಗೇರ್ ಮೈದೂರು ಅಚ್ಚುಕಟ್ಟಾಗಿ ನೇರವೇರಿಸಿ ಕೊಟ್ಟರು ಕಾರ್ಯಕ್ರಮ ನೀರ್ವಹಣೆ ಕಾರ್ತಿಕ್ ಆಚಾರ್ಯ ಎಂ ಕಲ್ಲಹಳ್ಳಿ ಮಾಡಿದರು ವಂದನಾರ್ಪಣೆ ಕು. ನೇತ್ರಾವತಿ ನೆಲ್ಲಿಕಟ್ಟೆ ನೇರವೇರಿಸಿದರು. ಈ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿ ಸುಮಾರು ೩೦ ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...