ಸೋಮವಾರ, ಸೆಪ್ಟೆಂಬರ್ 20, 2021

ನಾನೂ ಕಾರಣ (ಕವಿತೆ) - ಶ್ರೀ ಸೂರ್ಯಕಾಂತ ಕಾಂಬಳೆ.

ನಾನೂ ಕಾರಣ

ಎಲೆ ಹೆಣ್ಣೆ ನಿನ್ನಂದಕೆ ನಾನು... ಕಾರಣ
ನಿನ್ನಿಂದ ನಿನ್ನಂದ ಹೆಚ್ಚುತ್ತಿದೆ ಎನ್ನುವುದು ನಿನ್ನ ಭ್ರಮೆ
ತಲೆಯನ್ನು ಹಿಡಿದು ನಿನ್ನ ಪಾದದವರೆಗು ನಾ ಕಾರಣ
ಕೇಳು ನೀ ಅದೇನೆಂದು ?

ನಿನ್ನ ತಲೆಯ ಅಂದಕೆ ಗುಲಾಬಿ ಮಲ್ಲಿಗೆ ಕಾರಣ
ಹಣೆಯ ಅಂದಕೆ ಕುಂಕುಮ ಕಾರಣ
ಕಿವಿಯ ಅಂದಕೆ ಓಲೆಗಳು ಕಾರಣ
ಮೂಗಿನ ಅಂದಕೆ ಮೂಗುತಿ ಕಾರಣ

ನಿನ್ನ ಕೈಗಳ ಅಂದಕೆ ಬಳೆಗಳು ಕಾರಣ
ನಿನ್ನ ಕೈಯಲ್ಲಿರುವ ಮೊಬೈಲ್ ಕೂಡ ನಿನ್ನಂದಕೆ ಕಾರಣ
ನಿನ್ನಂದಕೆ ನಿನ್ನ ಉಡುಪುಗಳು ಕಾರಣ

ನಿನ್ನ ಪಾದಗಳ ಅಂದಕೆ ಕಾಲುಂಗುರ ಕಾರಣ
ಪಾದದ ಕೆಳಗಿರುವ ಚಪ್ಪಲಿಗಳು ನಿನ್ನಂದಕೆ ಕಾರಣ
ಎಲೆ ಹೆಣ್ಣೆ ನಿನ್ನಿಂದ ನಿನ್ನಂದ ಹೆಚ್ಚುತ್ತಿಲ್ಲ 
ನಮ್ಮಿಂದ ನಿನ್ನಂದ ಹೆಚ್ಚುತ್ತಿದೆ 
                     - ಸೂರ್ಯಕಾಂತ ಕಾಂಬಳೆ


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...