ನನ್ನ ಬದುಕು
ಖುಷಿಯಲ್ಲಿ ನಾ ಹಿಗ್ಗುವೆ..
ದುಃಖದಲ್ಲಿ ನಾ ಕುಗ್ಗುವೆ..
ಜೀವನವೇ ಜಿಗುಪ್ಸೆಯಾಗಿದೆ..
ಆದರೂ ಬದುಕಿರುವೆ..
ಹೆತ್ತವಳ ಆ ಖುಷಿಗಾಗಿ..!
ಜೀವನವೆಂಬ ಈ ಚದುರಂಗದಾಟದಲ್ಲಿ..
ಒತ್ತೆಯಾಳುವಿನಂತೆ ನಾನಿಲ್ಲಿ..
ನನ್ನ ಬದುಕಿಗೆ ಯಾವ ಅರ್ಥವೂ..
ಕಲ್ಪಿಸದ ಆ ದೇವರು
ಯಾಕದರೂ.. ಇನ್ನೂ ಬದುಕಿಸಿದ್ದಾನೆ..
ಎಂದು ಹೇಳುತಿದೆ ಈ ನೊಂದ ಮನವು..!
ಮನಸ್ಸಿನಲ್ಲಿ ಹೊರಲಾಗದ
ಭಯಾನಕ ಭಾವನೆಗಳು..
ನಿದ್ರೆಯಲ್ಲಿ ನನಸಾಗದ
ಅದೆಷ್ಟೋ ಕನಸುಗಳು..
ಕಾಡುತಿವೆ ಹಗಲಿರುಳು
ಈ ನೊಂದವಳನು ಬಿಡದೇ..!
ನೆನಪಿನ ಅಲೆಯಲ್ಲಿ..
ಮೌನದ ಪಯಣ ನನ್ನದಿಲ್ಲಿ..
ಸಾಗುವ ಹಾದಿಯಲ್ಲಿ..
ಬರೀ ಸವಾಲುಗಳೇ ನನಗಿಲ್ಲಿ..
ಮೆಟ್ಟಿ ಬದುಕ ಬಲ್ಲೆ ನಾ ಈ ಭುವಿಯಲ್ಲಿ..
ಆದರೂ ಮೌನವಾಗಿದೆ ಮನವೇಕೋ ಇಲ್ಲಿ..!?
- ಭಾವಗಳ ಬಂಡಿ (ಶಿರೀಷ ವಿದ್ಯಾರ್ಥಿನಿ)
ತಾ.ಜಿ. ಯಾದಗಿರಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ