ಶುಕ್ರವಾರ, ಸೆಪ್ಟೆಂಬರ್ 24, 2021

ನನ್ನ ಬದುಕು (ಕವಿತೆ) - ಭಾವಗಳ ಬಂಡಿ (ಶಿರೀಷ ವಿದ್ಯಾರ್ಥಿನಿ)ತಾ.ಜಿ. ಯಾದಗಿರಿ.

 ನನ್ನ ಬದುಕು 

ಖುಷಿಯಲ್ಲಿ ನಾ ಹಿಗ್ಗುವೆ..
ದುಃಖದಲ್ಲಿ ನಾ ಕುಗ್ಗುವೆ..
ಜೀವನವೇ ಜಿಗುಪ್ಸೆಯಾಗಿದೆ..
ಆದರೂ ಬದುಕಿರುವೆ..
ಹೆತ್ತವಳ ಆ ಖುಷಿಗಾಗಿ..!

ಜೀವನವೆಂಬ ಈ ಚದುರಂಗದಾಟದಲ್ಲಿ..
ಒತ್ತೆಯಾಳುವಿನಂತೆ ನಾನಿಲ್ಲಿ..
ನನ್ನ ಬದುಕಿಗೆ ಯಾವ ಅರ್ಥವೂ.. 
ಕಲ್ಪಿಸದ  ಆ ದೇವರು
ಯಾಕದರೂ.. ಇನ್ನೂ ಬದುಕಿಸಿದ್ದಾನೆ..
ಎಂದು ಹೇಳುತಿದೆ ಈ ನೊಂದ ಮನವು..!

ಮನಸ್ಸಿನಲ್ಲಿ ಹೊರಲಾಗದ 
ಭಯಾನಕ ಭಾವನೆಗಳು..
ನಿದ್ರೆಯಲ್ಲಿ ನನಸಾಗದ
ಅದೆಷ್ಟೋ ಕನಸುಗಳು..
ಕಾಡುತಿವೆ ಹಗಲಿರುಳು 
ಈ ನೊಂದವಳನು ಬಿಡದೇ..!

ನೆನಪಿನ ಅಲೆಯಲ್ಲಿ.. 
ಮೌನದ ಪಯಣ ನನ್ನದಿಲ್ಲಿ..
ಸಾಗುವ ಹಾದಿಯಲ್ಲಿ.. 
ಬರೀ ಸವಾಲುಗಳೇ ನನಗಿಲ್ಲಿ..
ಮೆಟ್ಟಿ ಬದುಕ ಬಲ್ಲೆ ನಾ ಈ ಭುವಿಯಲ್ಲಿ..
ಆದರೂ ಮೌನವಾಗಿದೆ ಮನವೇಕೋ ಇಲ್ಲಿ..!?

- ಭಾವಗಳ ಬಂಡಿ (ಶಿರೀಷ ವಿದ್ಯಾರ್ಥಿನಿ)
ತಾ.ಜಿ. ಯಾದಗಿರಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...