ಶುಕ್ರವಾರ, ಸೆಪ್ಟೆಂಬರ್ 24, 2021

ಪ್ರೇಮದೊಲವೇ(ಕಲ್ಪನೆ ಕವನ) - ಶ್ರೀ ಸೋಮಶೇಖರ ಹ ರಾಂಪೂರ.

ಪ್ರೇಮದೊಲವೇ(ಕಲ್ಪನೆ ಕವನ)

ಕಿರುನಗೆಯ ಬೀರಿದವಳೆ
ಕರವ ನೀ ಕೂಡಿಸಿದವಳೆ
ಜಡೆಯ ಮಹಾರಾಣಿಯೇ
ಏನು ಪಿಸು ಗುನುಗುತಿರುವೇ!

ಹಣೆಗೆ ದೃಷ್ಟಿ ನೀ ನೆಟ್ಟವಳೆ
ಮದರಂಗಿಯ ನಿನ್ನ ಕರಗಳೆ
ಚೆಲುವನ ಕರ ಅಪ್ಪಿಕೊಂಡಿವೇ
ಜಿನುಗುತಿವೇ ಪ್ರೀತಿಯ ಮಾತೇ!

ದಾಳಿಂಬೆ ದಂತದ ಬೊಂಬೆಯೇ
ನಸು-ನಾಚುತ ನೀ ಕುಳಿತಿರುವೇ
ಮೆಲ್ಲ-ಪಿಸು ಮಾತು ಹೇಳುತಿರುವೇ
ನಲ್ಲಗೆ ಬೆಲ್ಲದಂತಹ ಗೊಂಬೆಯೆ!

ನಿಲುವ ಸಮವಸ್ತ್ರ ತೊಟ್ಟವಳೆ
ಕೈ ಬೆರಳು ಸಲುಗೆಯ ಚೆಲುವೇ
ಕಾಡಿಗೆ ಕಣ್ಣಿನ ಮೊಗದೊಲವೇ
ರತೀಯ ಮಾತಿನ ನನ್ನೊಲವೇ!
- ಶ್ರೀ ಸೋಮಶೇಖರ ಹ ರಾಂಪೂರ ಸಹ ಶಿಕ್ಷಕರು ಎಚ್.ಪಿ.ಎಸ್ ಗುಂದಗಿ ವಿಜಯಪೂರ ಜಿಲ್ಲೆ
ಮೊ.೭೭೯೫೦೪೮೯೪೭.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...