ಸೋಮವಾರ, ಸೆಪ್ಟೆಂಬರ್ 20, 2021

ಬೀದರ ನಾಡು ಕಲೆ, ಸಾಹಿತ್ಯ, ಸಂಸ್ಕೃತಿ, ಧರ್ಮಗಳ ತವರೂರು. - ಡಾ.ಕೆ.ಎಸ್.ಬಂಧು, (ಕಾರ್ಯಕ್ರಮದ ವರದಿ)

ಬೀದರ ನಾಡು ಕಲೆ, ಸಾಹಿತ್ಯ, ಸಂಸ್ಕೃತಿ, ಧರ್ಮಗಳ ತವರೂರು. 
ಹುಮನಾಬಾದ :
ಬೀದರ ನಾಡು ಕಲೆ,ಸಾಹಿತ್ಯ,ಸಂಸ್ಕೃತಿ,ಧರ್ಮಗಳ ತವರೂರು.ಇಲ್ಲಿ ಜನ್ಮತಾಳುವುದು ಪುಣ್ಯ,ಇಂತಹ ನೆಲದಲ್ಲಿ ಜನಿಸಿದ ನಾವೇ ದನ್ಯರು. ಹೀಗಾಗಿ ಈ ಭಾಗದ ಅನೇಕ ಸಾಹಿತಿಗಳು ಸಮಾಜಿಕ ಸೇವೆ, ಸಾಹಿತ್ಯ,ಶಿಕ್ಷಣ,ಸಂಘಟನೆಗಳಲ್ಲಿ ಕೆಲಸ ಮಾಡುತ್ತಿರುವುದು ಸಂತಸ ತಂದಿದೆಯೆಂದು ಕಲಬುರಗಿಯ ಹಿರಿಯ ಸಾಹಿತಿ ಡಾ.ಕೆ.ಎಸ್.ಬಂಧು ಅವರು ನುಡಿದರು.
     ನಗರದ ಸಾಯಿ ಬಡಾವಣೆಯ ಕೃಷ್ಣ ಕುಂಜದಲ್ಲಿ ಜರುಗಿದ ಧರಿ ನಾಡು ಕನ್ನಡ ಸಂಘ ಮತ್ತು ಕರ್ನಾಟಕ ಜಾನಪದ ಪರಿಷತ್ತು ಸಂಯುಕ್ತವಾಗಿ ಏರ್ಪಡಿಸಿದ ಧರಿನಾಡಿನ ಸಾಹಿತಿ- ಕವಿ- ಕಲಾವಿದರ ಜೀವನ ಸಾಧನೆ: ಅವಲೋಕನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ  ತಮ್ಮ ವೃತ್ತಿ ಜೀವನದೊಂದಿಗೆ ಸಾಮಾಜಿಕ ಕಾರ್ಯ ಮಾಡುತ್ತಲೇ ಸಾರಿಕಾ ಗಂಗಾರವರು ಸಾವಿತ್ರಿಬಾಯಿ ಫುಲೆ ಅವರ ಚಿಂತನೆಗಳು ಇಡೀ ಬೀದರ ಜಿಲ್ಲಾದ್ಯಾಂತ
ಪಸರಿಸುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
         ಸಾಹಿತಿ-ಚಿಂತಕ ಡಾ.ಗವಿಸಿದ್ಧಪ್ಪ ಪಾಟೀಲ ರವರು ಮಾತನಾಡಿ ಸಾರಿಕಾ ಗಂಗಾ ಅವರ ಜೀವನ ಹೋರಾಟಮಯ ಬದುಕು,ಓದುವ ಅಭಿರುಚಿ,ಶಿಕ್ಷಕ ವೃತ್ತಿಯಲ್ಲಿ ಮಾಡಿದ ಸಾಧನೆಯ ಸೇವೆ,ಸಾಹಿತ್ಯ ರಚನೆಯಲ್ಲೂ ಹಿಂದೆ ಬೀಳದೆ ಸಂಘಟಕಿಯಾಗಿ, ಹತ್ತು ಹಲವು  ಕಾರ್ಯಗಳನ್ನು ಮಾಡುತ್ತಿರುವ ಸಾರಿಕಾ ಗಂಗಾ ರವರ ಸೇವೆ ಸ್ಮರಣೀಯವಾದದ್ದು ಎಂದು ಬಣ್ಣಿಸಿದರು.
  ‌ಡಾ.ಕೆ.ಚಂದ್ರಕಾಂತ ದುಬಲಗುಂಡಿಯ ಗಂಗಾ ಮನೆತನದ ಇತಿಹಾಸ ತಿಳಿಸಿ, ಮಾತಾಡಿದರು.ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಆನ್ ಲೈನ್ ಪ್ರಬಂಧ ಸ್ಪರ್ಧೆ ಯಲ್ಲಿ  ಪ್ರಶಸ್ತಿ ಪಡೆದ ವೀರಂತರೆಡ್ಡಿ ಜಂಪಾ ಮತ್ತು ರಾಜ್ಯ ಸಂಘಟನೆಯ ಸದಸ್ಯತ್ವ ಪಡೆದ ಭುವನೇಶ್ವರಿಯವರನ್ನು ಸನ್ಮಾನಿಸಲಾಯಿತು. ಗೀತಾ ರೆಡ್ಡಿ ಹಾಡನ್ನು ಹಾಡಿ ರಂಜಿಸಿದರು.ಸಾಹಿತಿ ಡಾ.ಜಯದೇವಿ ಗಾಯಕವಾಡ ಇದ್ದರು.ಅಧ್ಯಕ್ಷತೆಯನ್ನು ಯುವ ಸಾಹಿತಿ ಕೆ.ವೀರಾರೆಡ್ಡಿ ವಹಿಸಿ ಸಾರಿಕಾ ಅವರ ವ್ಯಕ್ತಿತ್ವ ಸೃಜನಶೀಲ ಬರವಣಿಗೆ ಅಪಾರವೆಂದರು.
ಜೈಶ್ರೀ ಕಾಳಗಿ ಪ್ರಾರ್ಥನಾಗೀತೆ ಹಾಡಿದರು.ಸ್ವಾಗತ ಪ್ರಾಸ್ತಾವಿಕವನ್ನು ಕಜಾಪ ಅಧ್ಯಕ್ಷ ಶರದಕುಮಾರ ನಾರಾಯಣಪೇಟ್ಕರ, ಭುವನೇಶ್ವರಿ ನಿರೂಪಿಸಿದರು,ಧರಿನಾಡು ಸಂಘದ ಅಧ್ಯಕ್ಷ ಸಿದ್ಧಾರ್ಥ ಮಿತ್ರಾ ವಂದಿಸಿದರು.ಮಲ್ಲಿಕಾರ್ಜುನ ಸಂಗಮಕರ್,ಈಶ್ವರ ತಡೋಳಾ,ಉಮೇಶ ಮಠದ,ಬಸವರಾಜ ದಯಾಸಾಗರ,ಶಶಿಧರ ಗಾವಲ್ಕರ,ನಂದಕುಮಾ ಮರೂರ,ಕರುಣಾದೇವಿ,ಅರುಣಾ ಶಿಂಧೆ,ಸುಜಾತ ಬಡಿಗೇರ,ಶ್ರೀದೇವಿ, ನೀಲಾವತಿ ಶರದ್,ವಾಣಿ ಭಯನೂರ,ಜ್ಯೋತಿ ಕೊಟ್ಟರಗಿ,ಶ್ವೇತಾರೆಡ್ಡಿ,ಉಮಾದೇವಿ ಹರಸೂರ,ವೈಶಾಲಿ ನಂದಗಿ,ಮಹಾದೇವಿ  ಶೀಲ
ಶೀಲವಂತ, ಮ್ಯಾಡಮ್,ಪ್ರೇಮಾ ನೆಲವಾಳೆ,ಅರವಿಂದ ಹುಡಗಿಕರ್,ಡಾ.ಪೀರಪ್ಪ ಸಜ್ಜನ,ರಮೇಶ ಸಜ್ಜನ,ಗಣೇಶ ರಾಠೋಡ,ಗೇ ಮು ಚವ್ಹಾಣ,ಶಿವು ಪವಾರ,ಅಶೋಕ ಹಾಲಹಳ್ಳಿ, ವಿಜಯಕುಮಾರ ಚಟ್ಟಿ,ಸಂಜನಾ ಕನಕಟಕರ್ ಇತರರು ಇದ್ದರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...