ಶುಕ್ರವಾರ, ಸೆಪ್ಟೆಂಬರ್ 24, 2021

ಗಝಲ್ - ಆಶಾ.ಎಲ್.ಎಸ್., ಶಿವಮೊಗ್ಗ.

ಗಝಲ್

ನಿನ್ನ ದನಿಯ ಮೋಡಿಗೆ ಸಿಲುಕಿರುವೆ ಗೆಳೆಯಾ/
ನಿನ್ನ ಮಧುರದನಿಗೇ ಕರಗಿ ಸೋತು ಹೋಗಿರುವೆ ಗೆಳೆಯಾ//

ನೀ ಯಾರೋ ಸಖ ಎಲ್ಲಿದ್ದೆ ಇಲ್ಲಿತನಕ / 
 ಹೃದಯಗುಡಿಯಲಿ ನೆಲೆಸಿ ಮೋಡಿ ಮಾಡಿರುವೆ ಗೆಳೆಯಾ//

ನಿನ್ನ ಸ್ವರ ಆಲಿಸಲು ದಿನವು  ಕಾತರಿಸುವೆನು /
ಸೋಲದ ಮನವಿಂದು ಏಕೋ ಕಾಡುತಿವೆ ಗೆಳೆಯ//

ಜನ್ಮಜನ್ಮದ ಬಾಂಧವ್ಯದ ನಲ್ಮೆಯ ಭರವಸೆಯಿತ್ತವನು/
ಜೀವನದಲಿ ಹೊಸ ಬೆಳಕ ತಂದಿರುವೆ ಗೆಳೆಯಾ//

ಪ್ರೀತಿ ಸ್ನೇಹ ಅನುಬಂಧದ  ಸಂಕೋಲೆ ತೊಡಿಸಿರುವೆ/
ಬಾಳಿನಲಿ ನವ ಕಾಂತಿ ಮೂಡಿಸಿರುವೆ ಗೆಳೆಯ//

ನನ್ನೆದೆಯ ಬೇಗುದಿಗಳ ಕಳೆಯುತ ನಾನಿರುವೆ ಎಂದವನೇ/
ಒಲ್ಮೆಗೆ ಆದೈವವಿತ್ತ ಕೊಡುಗೆ ನೀನಾಗಿರುವೆ ಗೆಳೆಯ//

ಶ್ರೀಶಾಳ ಅಂತರಾಳದಲಿ ನಿನ್ನ  ಹೆಸರೇ ಮಿಡಿಯುತಿರುವುದು/
ಬಾಳಿನ ದಿವ್ಯ ಸ್ಪಂದನವು ನೀನಾಗಿರುವೆ ಗೆಳೆಯಾ//

✍️ ಆಶಾ.ಎಲ್.ಎಸ್., ಶಿವಮೊಗ್ಗ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...