ಮಂಗಳವಾರ, ಅಕ್ಟೋಬರ್ 5, 2021

ನಾ ನಡೆದು ಬರುವ ಹಾದಿಯಲ್ಲಿ (ಚಿತ್ರ ಕವನ) - ಕಟ್ಟೆ.ಎಂ.ಎಸ್.ಕೃಷ್ಣಸ್ವಾಮಿ, ಮಂಡ್ಯ.

ನಾ ನಡೆದು ಬರುವ ಹಾದಿಯಲ್ಲಿ 

ನಾ ನಡೆದು ಬರುವ ಹಾದಿಯಲಿ
ಕಂಡೆನು ನಾನೊಂದು ಸೊಬಗಿನ ಕೆರೆಯಾಗಿ
ಮೈದುಂಬಿ ಹರಿಯುತಿತ್ತು ಆ ಕೊಳ
ಸಕಲ ಜೀವರಾಶಿಗೂ ಜೀವಧಾರೆಯಾಗಿ//೧//

ಬರಸಿಡಿಲಂತೆ ಬರಗಾಲ ಆವರಿಸಿದೆ
ತುಂಬಿದ ಪುಷ್ಕರಣೆಯ  ಬರಿದಾಗಿಸಿದೆ
ಬತ್ತಿದ ಧರಣಿಯ ಒಡಲು
ಬದಲಾದ ಪ್ರಕೃತಿಯ ಉಗ್ರತೆಗೆ  ಛಿದ್ರವಾಗಿಸಿದೆ//೨//

ಸಸ್ಯ ಶ್ಯಾಮಲೆಯ ನೀ ಕೊಂದು
ನಾವೇ ಮಾಡಿಕೊಂಡ ಈ ಪರಿ
ಮಾಡಿದ್ದು ಉಣ್ಣೋ ಮಹಾರಾಯವೆಂಬಂತೆ
ಪರಿಸರವ ಹಾಳುಮಾಡಿ ನೀನಾದೆ ಪರಾರಿ//೩//

ಇದ್ದಾಗ ನಿಸರ್ಗ ಸಂಪತ್ತುಗಳ ದಿಶಾ ದಿಕ್ಕಿನಲ್ಲೂ
ನಿನ್ನ ಆಸ್ತಿಯಂತೆ ಸಂರಕ್ಷಿಸಿ ಉಳಿಸಿ ಬೆಳೆಸು
ಮುಂದಿನ ಪೀಳಿಗೆಗೆ ನೀನಾಗುವೇ ಯಶ
ಜಗವ  ಬೆಳಗುವ ರವಿಯಂತೆ  ಪ್ರಜ್ವಲಿಸು//೪//
 
- ಕಟ್ಟೆ.ಎಂ.ಎಸ್.ಕೃಷ್ಣಸ್ವಾಮಿ, ಮಂಡ್ಯ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...