ಸೋಮವಾರ, ನವೆಂಬರ್ 22, 2021

ವರುಣನಿಗೆ ಒಂದು ಮನವಿ (ಕವಿತೆ) - - ಶ್ರೀಮತಿ ಭಾಗ್ಯ ಗಿರೀಶ್, ಹೊಸದುರ್ಗ.

ನಿಲ್ಲಿಸೋ ವರುಣ ನಿನ್ನ ಆರ್ಭಟ
ನೋಡಲಾಗುತ್ತಿಲ್ಲ ಜನರ ಪರದಾಟ
ಕುಂಭದ್ರೋಣ ಮಳೆಯ ಈ ಆಟ
ರೈತರಿಗೆಲ್ಲ ತಂದಿದೆ ಭಾರಿ ಸಂಕಟ.

ಜನ ಜೀವನವಾಗಿದೆ ತುಂಬಾ ದುಸ್ತರ
ಕೊಚ್ಚಿಹೋಗಿದೆ ನಿನ್ನ ಹರಿವಿಗೆ ಸುಂದರ ಪರಿಸರ
ನೋಡು,ಬದುಕು- ಬವಣೆ- ಭಾವನೆ ಕಷ್ಟದ ಆಗರ
ಮುಳುಗಿದೆ ರೈತ ಕುಟುಂಬದ ಬೆವರಿನ ಸಾರ.

ಜನರ ಆರೋಗ್ಯದಲ್ಲೂ ಏರುಪೇರು
ರಸ್ತೆಯಲಿ ನದಿಯಂತೆ ನಿಂತಿದೆ ನೀರು
ಅತೀವೃಷ್ಟಿ ರೈತರಿಗೆ ತಂದಿದೆ ರಕ್ತ ಕಣ್ಣೀರು
ಇನ್ನಾದರೂ ಮಳೆರಾಯ ಸ್ವಲ್ಪ ಸಮಾಧಾನದಿಂದಿರು.

ಜೀವನ ನೌಕೆ ಸಾಗಲು ಶಾಂತ ವಾತಾವರಣ ಬೇಕು
ಅತಿವೃಷ್ಟಿ-ಅನಾವೃಷ್ಟಿ ಆಗದಿದ್ದರೆ ಸಾಕು
ಕಾಲಕಾಲಕ್ಕೆ ಮಳೆ ಬಂದು ಬೆಳೆಯಾದರೆ ಸಾಕು
ನಿಸರ್ಗದ ಮೊಗದಲ್ಲಿ ಮಂದಹಾಸ ತುಂಬಿರಬೇಕು.
- ಶ್ರೀಮತಿ ಭಾಗ್ಯ ಗಿರೀಶ್, ಹೊಸದುರ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...