ಶನಿವಾರ, ಡಿಸೆಂಬರ್ 18, 2021

ರಾಧಾ ಕೃಷ್ಣ ಪ್ರೇಮೋತ್ಸವ (ಕವಿತೆ) - ಸ್ವಾತಿ ರಾವ್.

ಕೊಳಲ ಕರೆಗೆ ಕಾಯುತ ಕುಳಿತಹಳು ಕೃಷ್ಣೆ
ಕಣ್ಣಂಚಲೆ ಕನಸುಗಳ ಕಟ್ಟುತ್ತಾ,
ಕನವರಿಕೆಯ ಕರೆಯನ್ನು ಕೃಷ್ಣನಿಗೆ ನೀಡುತ್ತಾ
ಕಾಯುವಿಕೆಯ ಖುಷಿಯನ್ನು ಅನುಭವಿಸುತ್ತಾ,

ಕೊನೆಗೂ ಕೊಳಲನೂದುತ ಬರುವನು ಕೃಷ್ಣ
ಬೆಳದಿಂಗಳ ರಾತ್ರಿಯಲಿ 
ನೀರವ ಮೌನದಲಿ
ಪರಿಶುದ್ಧ ಪ್ರೀತಿಯನ್ನು ಜಗಕೆ ಸಾರುವ ತವಕದಲಿ

ಬೃಂದಾವನದ ತುಂಬಾ ಪ್ರೇಮದ ಕಂಪು ಬೀರಿರಲು
ಮಂದಾರದಂತ ಮುಖದಲ್ಲಿ ಮುಗ್ಧತೆಯು ಮಿಂಚುತ್ತಿರಲು
ಮುಕುಂದನು ಮನಸೋತಿಹನು ಮಾನಿನಿಯು
ಮುಗುಳ್ನಗುತ್ತಿರಲು

ತಂಗಾಳಿಯಲ್ಲಿ ತಲ್ಲೀನವಾಗಿ ತನುಮನ ಒಂದಾಗಿ
ಕೃಷ್ಣನು ಕೊಳಲನೂದುವನು ಸೊಗಸಾಗಿ
ನಾರಿಯು ನಾಚಿಹಳು ನೀರಾಗಿ
ನರ್ತಿಸಿದಳು ನವಿರಾಗಿ

ಈ ರಾಧ ಕೃಷ್ಣರ ಪ್ರೇಮೋತ್ಸವ ನಡೆದಿತ್ತು, 
ಸಪ್ತ ಸಾಗರದಾಚೆ ಎಲ್ಲೋ ಕಣ್ಮರೆಯಾಗಿ
ಹುಣ್ಣಿಮೆಯ ಚಂದ್ರನ ಸಾಕ್ಷಿಯಾಗಿ.. 
✍️ ಸ್ವಾತಿ ರಾವ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...