ಗುರುವಾರ, ಜನವರಿ 27, 2022

ದಡ್ಡರಲ್ಲಿ ದಡ್ಡರೋ ನಮ್ಮ ಜನ (ಕವಿತೆ) - ಸಾಬಣ್ಣ.ಎಚ್.ನಂದಿಹಳ್ಳಿ

ಹೆತ್ತ ತಂದೆ-ತಾಯಿಯ ಕ್ಷೇಮ
ವಿಚಾರಿಸದ ಮಗ ರಾಜಕೀಯ
ಪುಡಾರಿಯ ಹೆಂಡತಿ-ಮಕ್ಕಳ
ಹುಟ್ಟು ಹಬ್ಬಕ್ಕೆ ಶುಭಕೋರಿದನಂತೆ!

ಅಣ್ಣ-ತಮ್ಮಂದಿರೊಂದಿಗೆ ಮಾತನಾಡದ
ಮೂರ್ಖ ಸಿನಿಮಾ ಹೀರೋಗಳಾದ
ದರ್ಶನ್ ಯಶ್ ಧ್ರುವ ಸುದೀಪರೇ
ನಮ್ಮಣ್ಣಂದಿರು ಎಂದು ಜಂಭ ಕೊಚ್ಚಿಕೊಂಡನಂತೆ!

ನವಮಾಸ ಹೊತ್ತು - ಹೆತ್ತು ಭುವಿ
ಪರಿಚಯಿಸಿದ ತಾಯಿ-ತಂದೆ ಪ್ರೀತಿಗೆ
ಬೆಲೆ ಕೊಡದ ಮೂರ್ಖ ಸಪ್ತಪದಿ ತುಳಿದ ಹೆಂಡ್ತಿಗೆ ಹೆಚ್ಚೆಚ್ಚು-ಪ್ರೀತಿ ನೀಡ್ತೆನೆಂದನಂತೆ!
- ಸಾಬಣ್ಣ.ಎಚ್.ನಂದಿಹಳ್ಳಿ (ಜೆ)
ತಾ||ಶಹಾಪುರ ಜಿಲ್ಲಾ||ಯಾದಗಿರಿ
ಮೊಬೈಲ್ ನಂಬರ್-7348983463


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...