ಗುಡಿ ಕಟ್ಟಿದರು ಭಾವೈಕ್ಯತೆ ಎಂದು
ಗುಡಿ ಗುಡಿಯ ಒಳಗೆ ಮೂರ್ತಿ ಒಂದೇ
ಮರೆತೆವ ! ಏಕಾಗ್ರತೆಗೆ ಗುಡಿ ಒಂದೇ
ದುಡಿಮೆ ದೇವರು ಎಂದೆ
ಹುಂಡಿಗಳೇ ಏಕೆ ಇವನ ಮುಂದೆ !
ಎತ್ತ ತಿರುಗಿದರು ಕಾರು ಬಾರೋ ಶಿವನ ಮುಂದೆ
ತುಂಬಿ ತುಳುಕುತ್ತಿವೆ ಹುಂಡಿಗಳೊಳಗೆ ನಾಣ್ಯಗಳ ಹಿoಡು
ಬೇಡದೆ ಕೊಟ್ಟೆವು ವಜ್ರ ವೈಡೂರ್ಯಗಳ ದಂಡು.
ಕಂಬನಿ ಸುರಿಸುತ್ತಿದೆ ಬಾಗಿಲ ಮುಂದು
ತುಂಡು ಹೊಟ್ಟೆಗೆ ಜೀವವು ಬೆಂದು
ನಿತ್ಯವೂ ಬೇಡುತ್ತಿರುವರು ಒಂದು ಹಿಂಡು
ತಿರುಗಿ ನೋಡಲಿಲ್ಲ ಆ ಶಿವನ ಒಂದು ತುಂಡು
ಮನೆಯ ಮರವು ಬಾಡಿದೆಂದು ಹೊರನೋಕಿ
ಪಾಪದ ವಿಭೂತಿ ಹಣೆಯ ಮೇಲೆ ಗೀಚಿ
ಪರಶಿವನ ಕರೆದು ಪರಕಾಕಿ
ನಿತ್ಯವೂ ಉಳಿಯುವನ ಈ ಪಾತಕಿ
ಮರೆತೇ ಮಮತೆಯ ಯಾಕಿಂದು !,
ಅರ ಶಿವನ ಕರೆಯುತ, ಪರರ ಮರೆಯುತ
ಹೆಂಡವ ಕುಡಿದು ಉಂಡಿತುಂಬುತ
ಮಣ್ಣಲ್ಲಿ ಮಣ್ಣಾಗಿ ಹೋದೆ ಅರಸುತನ ಜಪಿಸುತ.,//
- ಕೆ.ಬಿ ಮಧು
ಕೊತ್ತತ್ತಿ ಹೋಬಳ್ಳಿ ,ಕೊತ್ತತ್ತಿ ಗ್ರಾಮ, ಮಂಡ್ಯ ತಾಲೂಕ್, ಮಂಡ್ಯ ಜಿಲ್ಲೆ.
9902431161.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ