ಶುಕ್ರವಾರ, ಡಿಸೆಂಬರ್ 9, 2022

ಕಲೆಗೆ ಬೆಲೆ (ಕವಿತೆ) - ಸುಭಾಷ್, ಸವಣೂರ

ಬರೆದಂತೆ ಬದುಕುವುದು 
ನುಡಿದಂತೆ ನಡೆಯುವುದು 
ಎಲ್ಲರೂ ಹೇಳುವಂತೆ ಕಷ್ಟ 
ಏಕೆಂದರೆ ಯಾರೂ ಕೇಳರು ನಮ್ಮ ಇಷ್ಟ 

ತೋಚಿದ್ದು ಗೀಚಿದ ಸಾಲುಗಳು 
ಭರವಸೆಯ ಬೆಳಕಾಗುವುದು ಕೆಲವರಿಗೆ 
ನಿರೀಕ್ಷಿಸದೇ ಕಣ್ಣಿಗೆ ಬಿದ್ದ ಸಾಲುಗಳು 
ಬದಲಾವಣೆಗೆ ಹಾದಿಯಾಗುವುದು ಹಲವರಿಗೆ 

ಬರವಣಿಗೆಯಿಂದ ಸಿಗದಿರಬಹುದು ಭಾರಿ ಹಣ
ಆದರೆ ತಿದ್ದಿದೆ ದಾರಿ ತಪ್ಪಿದ ಎಷ್ಟೋ ಮನಗಳ ಗುಣ 
ಭೂಮಿ ಮೇಲಿನ ಯಾರ ಕಲೆಯೂ ಕೀಳಲ್ಲ 
ದುಡ್ಡು ಬರುವ ಕಲೆಯೊಂದೇ ಶ್ರೇಷ್ಠವಲ್ಲ 

ಎಲ್ಲ ಕಲೆಯಲ್ಲೂ ಅಡಗಿಹಳು ಶಾರದೆ 
ಅದ ಗುರ್ತಿಸದೆ ಸೋತಿಹರು ಆಕೆಯ ಕಾಣದೆ 
ಶ್ರದ್ಧೆ ಭಕ್ತಿ ಶ್ರಮದಿ ಪೋಷಿಸು ನಿನ್ನ ಕಲೆಯ 
ಕೈ ಹಿಡಿದು ಕರುಣಿಸುವಳು ನಿನಗೊಂದು ನೆಲೆಯ.

 - ಸುಭಾಷ್, ಸವಣೂರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...