ಬಾಂಧವ್ಯ ಸಾಯುತಿದೆ ತಡೆಯ ಬನ್ನಿ.
ತಂತ್ರಜ್ಞಾನದಿ ಒಳಿತಾದಿತೆಂದು ಕನಸು ಕಂಡೆವು.
ಕೆಲಸದ ಹೊರೆ ಕಡಿಮೆಯಾದಿತೆಂದು ಆಸೆಪಟ್ಟೆವು.
ಕ್ಷಣದಿ ಮಾಹಿತಿ ಸಿಗುವುದೆಂದು ಹಿರಿ ಹಿಗ್ಗಿದೆವು.
ಕಂಡ ಕನಸುಗಳು ಕಮರಿದವು. ಮಾನಸಿಕ ಒತ್ತಡ ಹೆಚ್ಚಿತು.
ಆರೋಗ್ಯ ಹದಗೆಟ್ಟಿತು.
ಬಿಪಿ ಶುಗರ್ ಗಹಗಹಿಸಿ ನಕ್ಕವು.
ಗಳಿಕೆಯ ಹಣ ಸೋರಿತು,
ದೀಘಾ೯ಯುಷ್ಯದ ಕನಸು ಕಮರಿತು.
ನೆಮ್ಮದಿಯಿಂದಿದ್ದ ಕುಟುಂಬಗಳೊಡೆದವು.
ಒಟ್ಟಿಗೆ ಸೇರಿ ಊಟ ಮಾಡುವ ಮಕ್ಕಳು ಕೋಣೆಗೆ ಸೇರಿದರು.
ಮಗನೊಂದು ಕೋಣೆಗೆ ಸೊಸೆಯೊಂದು ಕೋಣೆಗೆ ಮಗಳು ಮತ್ತೊಂದು ಕೋಣೆಗೆ!
ನಗುವಿನಿಂದ ತುಂಬಿದ ಮನೆಯ ಜಗುಲಿ, ಬಣಗುಡುವಂತಾಯಿತು.
ಹಿರಿ ಜೀವಗಳು ಒಂಟಿಯಾದವು.
ಮಾತುಗಳಿಂದ ತುಂಬಿದ ಸಂಸಾರ ಮೂಕರೋಧನ ವಾಯಿತು.
ಮೊಬೈಲ್ ಗುಂಗಲ್ಲಿ ಮಕ್ಕಳನ್ನು, ವಯಸ್ಸಾದ ತಂದೆ ತಾಯಿಗಳನ್ನು ಅಲಕ್ಷಿಸುವಂತಾಯಿತು.
ಬೆಳಗೆದ್ದು ನಾನು ಯಾರ್ಯಾರ ನೆನೆಯಲಿ ಎಂಬುದು ಮರೆತು
ರಾತ್ರಿ ಯಾರ್ಯಾರಿಗೆ ಮೆಸ್ಸೇಜ್ ಮಾಡಿ ಲೈಕ್ಸ್ ಪಡೆಯಲಿ ಎಂದಾಯಿತು.
ಕಾಲೇಜಿಗೆ ಹೋಗುವ ನೆಪದಲ್ಲಿ ಗಾಡ೯ನ್ ಸೇರುವಂತಾಯಿತು.
ಮಕ್ಕಳ ಮುಖ ತಾಯಿ ನೋಡುವ ಬದಲು,
ಗಂಡನು ಹೆಂಡತಿಯ ಮುಖ ನೋಡುವುದರ ಬದಲು, ಮೊಬೈಲನ್ನೇ ನೋಡುವಂತಾಯಿತು.
ಮೊಬೈಲ್ ವೈರಸ್ ಮಕ್ಕಳನ್ನೂ ಆವರಿಸಿತು.
ಆಟದ ಅಂಗಳ ಮರೆತು ಮಕ್ಕಳು ಮನೆ ಮೂಲೆ ಸೇರುವಂತಾಯಿತು.
ಕರೋನಾ ಮಾರಿ ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿತು.
ದೈಹಿಕ ಚಟುವಟಿಕೆ ಯಿಲ್ಲದೆ, ಮಕ್ಕಳ ದಾಷ್ಟ್ಯ೯ತೆ ಕ್ಷೀಣಿಸಿತು.
ಅನ್ಯೋನ್ಯವಾಗಿದ್ದ ಗಂಡ ಹೆಂಡಿರ ಸಂಬಂಧಗಳಲ್ಲಿ ಬಿರುಕು ಕಾಣಿಸಿತು.
ಮೊಬೈಲ್ ಮಾತು ಸಂಶಯ ಹುಟ್ಟಿಸಿತು
ಡೈವೊಸ್೯ ಕೇಸ್ಗಳು ಹೆಚ್ಚಾದವು.
ಸೌಖ್ಯದಿಂದ ಬಾಳಬೇಕಿದ್ದ ದಂಪತಿಗಳು,
ಬದುಕಿನ ವಿನಾಶಕ್ಕೆ ಕೊಡಲಿ ಪೆಟ್ಟಾಯಿತು.
ಗಂಡ ಹೆಂಡಿರ ನಡುವೆ ಕೂಸುಗಳು ಅನಾಥವಾದವು.
ಸುಖ ಸಂಸಾರದ ನೆಮ್ಮದಿಗೆ ಮೊಬೈಲ್ ನಾಂದಿ ಹಾಡಿತು.
- ನಾರಾಯಣ ರಾಠೋಡ, ಉಪನ್ಯಾಸಕರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ