ಸೋಮವಾರ, ಮೇ 22, 2023

ಜನನಾಯಕ (ಕವಿತೆ) - ದಯಾನಂದ ಪಾಟೀಲ.

ಚುನಾವಣೆಯಲ್ಲಿ ಬಂಡವಾಳ ಹಾಕಿ ಅಧಿಕಾರಕ್ಕೆ ಬರುವ ನಾಯಕರು ಇವರು ಜನನಾಯಕರು,

ರಸ್ತೆ ಇಲ್ಲ ನೀರು ಇಲ್ಲ ಶಾಲೆ ಇಲ್ಲ ಆಸ್ಪತ್ರೆ ಇಲ್ಲ,
ಕೇಳಬೇಡ ಕೇಳಬೇಡ ಇವರು ನಾಯಕರು ಜನ ನಾಯಕರು.

ಜಾತಿ ಜಾತಿಗಳ ನಡುವೆ ಜಗಳ ಹಚ್ಚಿ ಅಧಿಕಾರ ಪಡೆಯುವ ನಾಯಕರು ಇವರು ಜನನಾಯಕರು,

ಕೋಟಿಗಟ್ಟಲೆ ಹಣ ನುಂಗಿ ದಿನ ಭತ್ಯೆ ಹೆಚ್ಚಿಸುವ ಇವರು ನಾಯಕರು ಜನ ನಾಯಕರು.

ಇರಲು ಮನೆ ಇಲ್ಲ ದುಡಿಯಲು ಕೆಲಸವಿಲ್ಲ ಉಪವಾಸವೇ ವನವಾಸ ಆದರೆ ಇವರು ಹಣದಲ್ಲಿ ಮಲಗುವ ನಾಯಕರು ಜನನಾಯಕರು.

ತಪ್ಪು ಮಾಡಿದರೆ
ಶಿಕ್ಷೆ ಇಲ್ಲ
ರೇಪ್ ಮಾಡಿದ ರೂ ಶಿಕ್ಷೆ ಇಲ್ಲ,
ಕೊಲೆ ಮಾಡಿದರೂ ಶಿಕ್ಷೆ ಇಲ್ಲ,,
ಇವರು ನಾಯಕರು ಇವರು ಜನನಾಯಕ ರು.

ಮತದಾರರ ಭಾವನೆಗೆ ಮಣ್ಣು ಹಾಕುವ ನಾಯಕರು ಇವರು ಜನ ನಾಯಕರು,
ಸರ್ಕಾರ ಯೋಜನೆ
ಮಾಡಿ ಲೂಟಿ ಮಾಡುವ ನಾಯಕರು ಇವ್ರು ಜನನಾಯಕರು.

ಆರಿಸಿಕೊಟ್ಟ ಪಕ್ಷಕ್ಕೆ ನಾಯಕರಿಗೆ ಮೋಸ ಮಾಡುವ ನಾಯಕರು ಇವರು ಜನ ನಾಯಕರು.


- ದಯಾನಂದ ಪಾಟೀಲ, ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...