ಗುರುವಾರ, ಜೂನ್ 22, 2023

ಭೂಮಿ ಎಂಬ ಒಡಲು (ಕವಿತೆ) - ಬಸವರಾಜ ಕರುವಿನ, ಬಸವನಾಳು.

ಭೂಮಿಯ ಒಡಲಲ್ಲಿ 
ಪ್ರಕೃತಿ ಮಾಡಿಲ್ಲಲ್ಲಿ 
ಅರಳಿದೆ ಈ ಜೀವರಾಶಿ 
ಕೊಲ್ಲಬೇಡಿ ಭೂಮಿಗೆ  ವಿಷ ಹಾಯಿಸಿ 

ಪ್ರಕೃತಿಯ ಹಸಿರಲ್ಲಿ 
ತಂಗಾಳಿ ಉಸಿರಲ್ಲಿ 
ಹೆಸರಿಲ್ಲದೇ ಬದುಕುತಿಹವು  ಜೀವರಾಶಿ 
ಕೊಲ್ಲಬೇಡಿ ಗುಂಡು ಹಾರಿಸಿ 

ಜಗತ್ತಿನ ಜೀವ ಸಂಕುಲ 
ಬದುಕುತಿದೆ ಈ ಲೋಕದಗಲ
ಕಡಿಯಬೇಡಿ ಹಸಿರ ಕಾಡು
ಬೆಳೆಯುವುದು ನಮ್ಮ ನಾಡು 

ಜೀವಕ್ಕೆ ಜೀವವಾಗಿ
ನಾಡಿಗೆ ನಾಡಿಯಾಗಿ 
ಬದುಕಬೇಕಿದೆ ಮಾನವ 
ಆಗ ಕಾಣಬಹುದು ಸುಂದರ ಜಗವ !

- ಬಸವರಾಜ ಕರುವಿನ, ಬಸವನಾಳು.

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...