ಗುರುವಾರ, ಜೂನ್ 22, 2023

ಭೂಮಿ ಎಂಬ ಒಡಲು (ಕವಿತೆ) - ಬಸವರಾಜ ಕರುವಿನ, ಬಸವನಾಳು.

ಭೂಮಿಯ ಒಡಲಲ್ಲಿ 
ಪ್ರಕೃತಿ ಮಾಡಿಲ್ಲಲ್ಲಿ 
ಅರಳಿದೆ ಈ ಜೀವರಾಶಿ 
ಕೊಲ್ಲಬೇಡಿ ಭೂಮಿಗೆ  ವಿಷ ಹಾಯಿಸಿ 

ಪ್ರಕೃತಿಯ ಹಸಿರಲ್ಲಿ 
ತಂಗಾಳಿ ಉಸಿರಲ್ಲಿ 
ಹೆಸರಿಲ್ಲದೇ ಬದುಕುತಿಹವು  ಜೀವರಾಶಿ 
ಕೊಲ್ಲಬೇಡಿ ಗುಂಡು ಹಾರಿಸಿ 

ಜಗತ್ತಿನ ಜೀವ ಸಂಕುಲ 
ಬದುಕುತಿದೆ ಈ ಲೋಕದಗಲ
ಕಡಿಯಬೇಡಿ ಹಸಿರ ಕಾಡು
ಬೆಳೆಯುವುದು ನಮ್ಮ ನಾಡು 

ಜೀವಕ್ಕೆ ಜೀವವಾಗಿ
ನಾಡಿಗೆ ನಾಡಿಯಾಗಿ 
ಬದುಕಬೇಕಿದೆ ಮಾನವ 
ಆಗ ಕಾಣಬಹುದು ಸುಂದರ ಜಗವ !

- ಬಸವರಾಜ ಕರುವಿನ, ಬಸವನಾಳು.

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...