ಗುರುವಾರ, ಜೂನ್ 22, 2023

ಭೂಮಿ ಎಂಬ ಒಡಲು (ಕವಿತೆ) - ಬಸವರಾಜ ಕರುವಿನ, ಬಸವನಾಳು.

ಭೂಮಿಯ ಒಡಲಲ್ಲಿ 
ಪ್ರಕೃತಿ ಮಾಡಿಲ್ಲಲ್ಲಿ 
ಅರಳಿದೆ ಈ ಜೀವರಾಶಿ 
ಕೊಲ್ಲಬೇಡಿ ಭೂಮಿಗೆ  ವಿಷ ಹಾಯಿಸಿ 

ಪ್ರಕೃತಿಯ ಹಸಿರಲ್ಲಿ 
ತಂಗಾಳಿ ಉಸಿರಲ್ಲಿ 
ಹೆಸರಿಲ್ಲದೇ ಬದುಕುತಿಹವು  ಜೀವರಾಶಿ 
ಕೊಲ್ಲಬೇಡಿ ಗುಂಡು ಹಾರಿಸಿ 

ಜಗತ್ತಿನ ಜೀವ ಸಂಕುಲ 
ಬದುಕುತಿದೆ ಈ ಲೋಕದಗಲ
ಕಡಿಯಬೇಡಿ ಹಸಿರ ಕಾಡು
ಬೆಳೆಯುವುದು ನಮ್ಮ ನಾಡು 

ಜೀವಕ್ಕೆ ಜೀವವಾಗಿ
ನಾಡಿಗೆ ನಾಡಿಯಾಗಿ 
ಬದುಕಬೇಕಿದೆ ಮಾನವ 
ಆಗ ಕಾಣಬಹುದು ಸುಂದರ ಜಗವ !

- ಬಸವರಾಜ ಕರುವಿನ, ಬಸವನಾಳು.

1 ಕಾಮೆಂಟ್‌:

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...