ಮಂಗಳವಾರ, ಜೂನ್ 20, 2023

ತಾಯ್ತನದ ಕುಡಿ (ಕವಿತೆ) - ಸ್ವಪ್ನ ಆರ್. ಎ., ಹಿರಿಯೂರು.

 ಅವ್ವನ ಅoತರ್ಯದ ಬಾಳಿನ ಕುಡಿ,
ತಾಯಿಯ ಹೃದಯದ ತಂತಿಯ ಮಿಡಿ
ಮಾತೆಯ ಮಾಧುರ್ಯದ ಬೆಳಕಿನ ಕಿಡಿ//

ಜೀವನದ ದಾರಿಯ ಕೈ0ಕರ್ಯದ ಅಡಿ
ಹೆಜ್ಜೆ ಹೆಜ್ಜೆಯ ದೀಪ್ತಿಯ ಮಡಿ
ಯಶಸ್ಸಿನ ಮೆಟ್ಟಿಲಿನ ಕಡೆ ನೀ ನಡಿ//

ಪುಟಕ್ಕಿಟ್ಟ ಖನಿಯ ನವರತ್ನ ಮಣಿ
ಮಾತಿಗೆಳೆಯುವ ಮಮತೆಯ ಮುದ್ದಿನ ಗಿಣಿ
ಕರುಣಾಮಯಿ,ಕಾಳಜಿಯ ಮಿಂಚಿನ ಮಿಣಿ//

ಭಾವನೆಯ ಬಿಂದುವಿನ ಮಾತಿನ ಗಣಿ
ಮುಂದೆ ಆಗುವೆಯ ಸಮಾಜದ ಧಣಿ
ಸಂಬಂಧದ ಸೇತುವೆಯಲ್ಲಿ ಸಿಕ್ಕ ಮಗಳು ಭರಣಿ//

ಅಕ್ಕರೆಯ ಅಮೃತದ ಒಡಲ ಜನ್ಮದಾತೆ
ತುತ್ತನ್ನು ಉಣಿಸುವ ನಿತ್ಯದ ಅನ್ನದಾತೆ
ತಾಯ್ತನಕ್ಕೆ ಭಾಗ್ಯವ ತಂದ ಭಾಗ್ಯದಾತೆ//

ಓದಿದನ್ನು ತಿಳಿಸುವ ಇವಳು ಅಕ್ಷರದಾತೆ
ಓದು,ಬರಹ ಕಲಿಯುವ ಜ್ಞಾನದಾತೆ
ಮಗಳಿಂದ ಹೆತ್ತ ಕರುಳ ಪಡೆದ ಸೌಭಾಗ್ಯದಾತೆ// 

- ಸ್ವಪ್ನ ಆರ್. ಎ., ಹಿರಿಯೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...