ಮೋಡ ಮುಸುಕಿರಲು ನಯನ ಸಂತಸದಿ ಬಾನು ನೋಡಿದೆ, ಬಿಸಿಲಿನ ಬೇಗೆಗೆ ಭೂಮಿ ಬೆಂದಿರಲು ಮೋಡ ನೋಡಿ ಸಂತಸವ ಪಟ್ಟಿದೆ, ಓ ಮಳೆರಾಯ ನೀ ಒಮ್ಮೆ ಜೋರಾಗಿ ಸುರಿಯಬಾರದೆ.
ವರ್ಷಧಾರೆಗೆ ಭೂಮಿ ಹಾತೋರೆದಿರಲು ನೀ ಬಂದು ಬಾಯಾರಿಕೆಯ ತನಿಸಬಾರದೆ, ಎಷ್ಟೋ ರೈತರ ಕನಸು ಮುರಿದಿರಲು ನೀ ಬಂದು ಅವರನ್ನೊಮ್ಮೆ ನಗಿಸಬಾರದೆ, ಓ ಮಳೆರಾಯ ನೀ ಒಮ್ಮೆ ಜೋರಾಗಿ ಸುರಿಯಬಾರದೆ.
ಪಶು ಪಕ್ಷಿ ಸಂಕುಲವು ದಾಹದಿ ಬೆಂದಿರಲು ನೀ ಬಂದು ಸಂತಸದಿ ನಕ್ಕು ನಗಿಸಬಾರದೆ, ಮಲೆನಾಡ ಮೈ ಬಣ್ಣ ಮಾಸಿ ಹೋಗಿರಲು ನೀ ಬಂದು ಬಣ್ಣವ ಬಳಿಯಬಾರದೆ, ಓ ಮಳೆರಾಯ ನೀ ಒಮ್ಮೆ ಜೋರಾಗಿ ಸುರಿಯಬಾರದೆ.
ಕುಲ ಕೋಟಿ ಜೀವಗಳಿಗೆ ಆಸರೆಯಾಗಿರಲು ನೀ ಬಂದು ತನು ಮನವ ತನಿಸಬಾರದೆ, ಬಂದ ಹಾಗೆ ಮಾಡಿ ನೀ ಮರಳಿ ಹೋಗುತಿರಲು ಮನದಿ ಮೂಡಿದ ಸಂತಸ ಸಂಗಡ ವಾಗುವುದೇ, ಓ ಮಳೆರಾಯ ನೀ ಒಮ್ಮೆ ಜೋರಾಗಿ ಸುರಿಯಬಾರದೆ.
- ವಸಂತ ಪುಂಡಲೀಕ, ಬಾಗೇವಾಡಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ