ಶುಕ್ರವಾರ, ಜುಲೈ 7, 2023

ಮಳೆರಾಯ (ಕವಿತೆ) - ವಸಂತ ಪುಂಡಲೀಕ, ಬಾಗೇವಾಡಿ.

ಮೋಡ ಮುಸುಕಿರಲು ನಯನ ಸಂತಸದಿ ಬಾನು ನೋಡಿದೆ, ಬಿಸಿಲಿನ ಬೇಗೆಗೆ ಭೂಮಿ ಬೆಂದಿರಲು ಮೋಡ ನೋಡಿ ಸಂತಸವ ಪಟ್ಟಿದೆ, ಓ ಮಳೆರಾಯ ನೀ ಒಮ್ಮೆ ಜೋರಾಗಿ ಸುರಿಯಬಾರದೆ.

ವರ್ಷಧಾರೆಗೆ ಭೂಮಿ ಹಾತೋರೆದಿರಲು ನೀ ಬಂದು ಬಾಯಾರಿಕೆಯ ತನಿಸಬಾರದೆ, ಎಷ್ಟೋ ರೈತರ ಕನಸು ಮುರಿದಿರಲು ನೀ ಬಂದು ಅವರನ್ನೊಮ್ಮೆ ನಗಿಸಬಾರದೆ, ಓ ಮಳೆರಾಯ ನೀ ಒಮ್ಮೆ ಜೋರಾಗಿ ಸುರಿಯಬಾರದೆ.

ಪಶು ಪಕ್ಷಿ ಸಂಕುಲವು ದಾಹದಿ ಬೆಂದಿರಲು ನೀ ಬಂದು ಸಂತಸದಿ ನಕ್ಕು ನಗಿಸಬಾರದೆ, ಮಲೆನಾಡ ಮೈ ಬಣ್ಣ ಮಾಸಿ ಹೋಗಿರಲು ನೀ ಬಂದು ಬಣ್ಣವ ಬಳಿಯಬಾರದೆ, ಓ ಮಳೆರಾಯ ನೀ ಒಮ್ಮೆ ಜೋರಾಗಿ ಸುರಿಯಬಾರದೆ.

ಕುಲ ಕೋಟಿ ಜೀವಗಳಿಗೆ ಆಸರೆಯಾಗಿರಲು ನೀ ಬಂದು ತನು ಮನವ ತನಿಸಬಾರದೆ, ಬಂದ ಹಾಗೆ ಮಾಡಿ ನೀ ಮರಳಿ ಹೋಗುತಿರಲು ಮನದಿ ಮೂಡಿದ ಸಂತಸ ಸಂಗಡ ವಾಗುವುದೇ, ಓ ಮಳೆರಾಯ ನೀ ಒಮ್ಮೆ ಜೋರಾಗಿ ಸುರಿಯಬಾರದೆ.
    
      
- ವಸಂತ ಪುಂಡಲೀಕ, ಬಾಗೇವಾಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...