ಗುರುವಾರ, ಡಿಸೆಂಬರ್ 7, 2023

ನೀನಿರ ಬೇಕು ನನ್ನ ಬಳಿ (ಕವಿತೆ) - ಜ್ಯೋತಿ ಕುಮಾರ್.ಎಂ(ಜೆ.ಕೆ.).

ನೀನಿರ ಬೇಕು ನನ್ನ  ಬಳಿ
ನಾನಿರ ಬೇಕು 
ನಿನ್ನ  ತೋಳ್ತೆಕ್ಕೆಯಲಿ
ಪ್ರೀತಿ ಪ್ರೇಮಕ್ಕಾಗಿ ಅಲ್ಲ
ಸರಸಕ್ಕಂತು ಅಲ್ಲವೇ ಅಲ್ಲ 
ನನ್ನ  ನಿನ್ನ  ಉಸಿರುಗಳು 
ಮೇಳೈಸಲು
ನಿನ್ನ  ಬೆರಳುಗಳು
ನನ್ಮುಂಗುರುಳಿನಲಿ 
ಮೆರವಣಿಗೆಯಾಗಲು
ನಿನ್ನ  ಹೃದಯ ಬಡಿತವ
ನಾ ಅರಿಯಲು
ನಿನ್ನ  ಬಗೆಗಿನ 
ನನ್ನ  ತುಡಿತವ
ನೀ ತಿಳಿಯಲು
ಒಬ್ಬರಿಗೊಬ್ಬರು
ನಾವಿಬ್ಬರೂ ಎಂದು
ನಾವೀರರ್ವರೂ 
ಎಂಬ ಬಿಸುಪ
ಅನುಭವಿಸಲು
ಪ್ರೇಮ ಕಾಮಕ್ಕೂ
ಮೀರಿದ ಮಧುರಾತಿ
ಮಧುರ
ಅನುಭೂತಿಯಾಗಲು
ನಾನೇ ನೀನಾಗಲು
ನೀನು ನಾನೇ
ಆಗಲು
ಆಗಿರಲು 
ಆಗುತ್ತಲೇ ಇರಲು
ಜಂಗಮವಾಗಲು 
ಸ್ಥಾವರವಾಗಲು 
ಒಬ್ಬರಲ್ಲಿ 
ಮತ್ತೊಬ್ಬರು
ಐಕ್ಯವಾಗಲು 
ನಾವಿರಬೇಕು 
ನಮ್ಮಿಬ್ಬರ 
ಜೊತೆಯಲ್ಲಿ
ಸಂಗದಲಿ
ನಿರಂತರ 
ನಿರಾಕಾರ 
ಅನವರತ.

- ಜ್ಯೋತಿ ಕುಮಾರ್.ಎಂ(ಜೆ.ಕೆ.).

ಮನದಾಳದ ನೋವಿಗೆ ಕಣ್ಣೀರೇ ಆಸರೆ (ಕವಿತೆ) - ಬಸವರಾಜ್ ಎಚ್.ಹೊಗರನಾಳ.

ಅಳುವುದಾದರೆ ಅತ್ತು ಬಿಡು ನೀನು 
ಕಣ್ಣಲ್ಲಿ ಕಣ್ಣೀರು ಅಂತ್ಯವಾಗುವವರೆಗೂ
ಮನದಲ್ಲಿರುವ ನೋವು ನಿವಾರಣೆ ಆಗುವವರೆಗೂ
ನಿನ್ನ ಸಂತೈಸುವವರು ನಿನಗೆ ಸಿಗುವವರೆಗೂ....

ಅಳುವುದಾದರೆ ಅತ್ತು ಬಿಡು ನೀನು 
ನಿನ್ನ ನೋವು ಇನ್ನೊಬ್ಬರಿಗೆ ಅರ್ಥ ಆಗುವವರೆಗೂ
ನಿನ್ನನ್ನು ನೋಯಿಸಿದವರಿಗೆ ನೋವಾಗುವವರೆಗೂ
ನಿನ್ನ ನೋವಿಗೆ ಔಷದಿ ಸಿಗುವವರೆಗೂ....

ಅಳುವುದಾದರೆ ಅತ್ತು ಬಿಡು ನೀನು 
ನೀ ಪ್ರೀತಿಸಿದವರು ನಿನ್ನ ಪ್ರೀತಿಸಲಿಲ್ಲ ಎಂದು 
ನೀ ಇರುವ ಜಾಗ ನದಿಯಾಗಿ ಹರಿಯುವವರೆಗೂ
ಅತ್ತುಬಿಡು ನೀನು ಯಾರಿಗೂ ಕಾಣದ ಮರೆಯಲಿ....

ಅಳುವುದಾದರೆ ಅತ್ತು ಬಿಡು ನೀನು 
ಸಂಬಧಿಕರು ನಿನಗೆ ಬೆಲೆ ಕೊಡಲಿಲ್ಲ ಎಂದು 
ನಿನ್ನ ದೇಹ ಮಣ್ಣಲ್ಲಿ ಮಣ್ಣಾಗುವವರೆಗೂ
ನೀ ಹತ್ತರೆ ಕಣ್ಣೀರು ಒರೆಸುವವರು ಇಲ್ಲ ಎಂದು....

- ಬಸವರಾಜ್ ಎಚ್.ಹೊಗರನಾಳ. ಪತ್ರಿಕೋದ್ಯಮ ವಿದ್ಯಾರ್ಥಿ ಧಾರವಾಡ 
ಮೊ.ನಂ:8951228607

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...