ಭಾನುವಾರ, ಅಕ್ಟೋಬರ್ 6, 2024

ಪ್ರೇಮವಿರಾಮ...


ಪ್ರೇಮವಿರಾಮ...

ಬೆಳ್ಮುಗಿಲಾಗದೆ,
ಕಾರ್ಮೋಡವಾದರೂ 
ಸುರಿದೆ ನೀನು, ಪ್ರೀತಿ 
ಹಸಿರಾಗಲು, ಹಸನಾಗಲು...

ಕಣ್ಣ ಬಿಂದುವಾಗಿ 
ಜಾರಿದರೂ, ಕಾರಣಳಾದೆ 
ಕಣ್ಣೋಳು ಹೊಕ್ಕ ಕಣಗಳು,
ಹೊರಬರಲು.. ಹೊರಬರಲು...

ಹಿಡಿದ ತುತ್ತನು,
ನಿತ್ಯವು ಕೈ ಜಾರಿಸಿದೆ,
ಅಗುಳು ಬೆಂದಿದೆ ಇಲ್ಲವೋ ಎಂದು,
ಪರೀಕ್ಷಿಸಲು...ಪರೀಕ್ಷಿಸಲು..

ನಿನ್ನ ಅಗಲಿಕೆಯಲ್ಲೂ 
ತುಂಬಿದೆ ಕಾಳಜಿಯ ಬಿಂದು,
ಸಿಕ್ಕು ಸಿಗಲಾರದ ನೀನು,
ನಗುತಿರು ಎಂದೆಂದು...
ಬಿ ಎಂ ಮಹಾಂತೇಶ
ಕ್ಯಾಸನಕೆರೆ, ಕೂಡ್ಲಿಗಿ ತಾ. ವಿಜಯನಗರ ಜಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...