ಪ್ರೇಮವಿರಾಮ...
ಬೆಳ್ಮುಗಿಲಾಗದೆ,
ಕಾರ್ಮೋಡವಾದರೂ
ಸುರಿದೆ ನೀನು, ಪ್ರೀತಿ
ಹಸಿರಾಗಲು, ಹಸನಾಗಲು...
ಕಣ್ಣ ಬಿಂದುವಾಗಿ
ಜಾರಿದರೂ, ಕಾರಣಳಾದೆ
ಕಣ್ಣೋಳು ಹೊಕ್ಕ ಕಣಗಳು,
ಹೊರಬರಲು.. ಹೊರಬರಲು...
ಹಿಡಿದ ತುತ್ತನು,
ನಿತ್ಯವು ಕೈ ಜಾರಿಸಿದೆ,
ಅಗುಳು ಬೆಂದಿದೆ ಇಲ್ಲವೋ ಎಂದು,
ಪರೀಕ್ಷಿಸಲು...ಪರೀಕ್ಷಿಸಲು..
ನಿನ್ನ ಅಗಲಿಕೆಯಲ್ಲೂ
ತುಂಬಿದೆ ಕಾಳಜಿಯ ಬಿಂದು,
ಸಿಕ್ಕು ಸಿಗಲಾರದ ನೀನು,
ನಗುತಿರು ಎಂದೆಂದು...
ಬಿ ಎಂ ಮಹಾಂತೇಶ
ಕ್ಯಾಸನಕೆರೆ, ಕೂಡ್ಲಿಗಿ ತಾ. ವಿಜಯನಗರ ಜಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ