ಗುರುವಾರ, ಡಿಸೆಂಬರ್ 19, 2024

ಇವಳೇ ಅವಳು...

""ಇವಳೇ ಅವಳು""

 ಎನ್ನೆದೆಯೊಳಗೆ ಹಾಡಾಗಿ ಹರಿದವಳು 
ಈ ಹೃದಯವ ಸದ್ದಿಲ್ಲದೆ ಕದ್ದವಳು

 ಒರಟು ಮನವ ಸಿಹಿಯಾಗಿಸಿದವಳು
 ತುಟಿಯಂಚಿಗೆ ಹೊಸ ಭಾಷೆ ಕಲಿಸಿದವಳು

 ಕನಸಿಗೆ ಹೊಸ ರೆಕ್ಕೆ ಪುಕ್ಕ ಕಟ್ಟಿದವಳು 
ಮನಸಿಗೆ ಪ್ರೀತಿಯ ತೋರಣ ವಾದವಳು

 ಅರೆಘಳಿಗೆಯೂ ದೂರ ಸಹಿಸದವಳು 
ನಿದಿರೆಯಲ್ಲಿಯೂ ಕನವರಿಕೆಯಾದವಳು

 ನನ್ನುಸಿರಿಗೆ ಹೆಸರು ಬೆರೆಸಿದವಳು 
ಅವಳ ಹೆಸರಲೇ ಮಧುವ ಚೆಲ್ಲುವವಳು 

ಬೊಗಸೆ ಕಂಗಳಲಿ ನೂರು ಪದವಾದವಳು 
ಮೊದಲ ನೋಟಕೇ ಬೆರಗು ಎನಿಸಿದವಳು 

ಯಾರೆಂದು ಹೇಳಲಿ ಅವಳ ಇವಳೇ ಅವಳು 
ಎದೆಯೊಳಗೆ ಜಿನುಗುವ ಒಲವಿನೊರತೆಯಾದವಳು
 
 ಮಧುಮಾಲತಿ ರುದ್ರೇಶ್  ಬೇಲೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...