ಮಂಗಳವಾರ, ಡಿಸೆಂಬರ್ 31, 2024

ಹೊಸ ವರ್ಷ ತರಲಿ ಹರ್ಷ...

ಹೊಸ ವರ್ಷ
ತರಲಿ ಹರ್ಷ 

ಹೊಸ ವರ್ಷವು ತರಲಿ ಹರುಷ 
ಮೂಡಲಿ ಮುಖದಲಿ ಪ್ರತಿದಿನ ಸಂತೋಷ 
ಬೆಳೆಸಿಕೊಳ್ಳೋಣ ಪರಸ್ಪರ ಎಲ್ಲರಲೂ ವಿಶ್ವಾಸ 
ಬಾಳಿ ಬದುಕಿ ನಗುನಗುತಾ ಪ್ರತಿ ನಿಮಿಷ

ಮರೆತೆ ಹೋಯಿತು 2024 ರ ಕೊನೆಯ ದಿನ 
ನೆನಪಾಯಿತು 2025 ರ ಮೊದಲ ದಿನ
ಕಷ್ಟದ ದಿನಗಳನ್ನು ಮರೆಯೋಣ 
ಸುಖದ ದಿನಗಳನ್ನು ಮನದಲಿ ಇರಿಸೋಣ 

ಹೊಸ ವರ್ಷ ಹೊಸ ಚಿಂತನೆ 
ಇನ್ನೇಕೆ ಹೋದ ವರ್ಷದ ಯಾತನೆ
ಬದಲಾದದ್ದು ದಿನದರ್ಶಿಕೆ ಮಾತ್ರನೇ 
ಮತ್ತದೇ ಬದುಕಿನ ಪಾತ್ರಗಳ ನಟನೆ 

ಅಂದುಕೊಂಡ ಕೆಲಸಗಳು ಯಶಸ್ವಿಯಾಗಲಿ 
ಬದುಕಿನ ಬಂಡಿ ಸುಖದಿ ಸಾಗಲಿ
ಬೇರೆಯವರ ತಪ್ಪನ್ನು ಕ್ಷಮಿಸುವ ಗುಣ ಬರಲಿ 
ನಿಮ್ಮ ಆತ್ಮವಿಶ್ವಾಸ ಸದಾ ನಿಮ್ಮೊಂದಿಗಿರಲಿ 

ಭಾರತೀಯರಿಗೆ ಯುಗಾದಿಯೇ ಹೊಸ ವರ್ಷವು 
ಎಲ್ಲರಂತೆ ನಾವೂ ಇಂದು ಪಡೆಯೋಣ ಹೊಸ ಹರ್ಷವು 
ಇರಲಿ ದ್ವೇಷ ಅಸೂಯೆ ವಂಚನೆಗೆ ವಿರಾಮವು
ಯಾರು ಏನೇ ಮೋಸ ಮಾಡಲಿ ಸುಮ್ಮನಿರಿ ನೀವು 

ಹೊಸ ವರ್ಷದಂದು ಶಪಥ ಮಾಡಿರಿ 
ಸರ್ವರೊಂದಿಗೂ ನಗುನಗುತಾ ಬಾಳಿರಿ 
ಸಿಹಿಯ ಜೊತೆಗೆ ಹೊಸ ವರ್ಷವ ಸ್ವಾಗತಿಸಿರಿ 
ನಾನೆಂಬ ಅಹಂ ಬಿಟ್ಟು ನಾವೆಂಬ ಭಾವದಿ ಬದುಕಿರಿ 

ಶ್ರೀ ಮುತ್ತು ಯ ವಡ್ಡರ
ಶಿಕ್ಷಕರು 
ಬಾಗಲಕೋಟ
9845568484

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...