ಶನಿವಾರ, ಜನವರಿ 25, 2025

ಗಣರಾಜ್ಯೋತ್ಸವ...

"ಗಣರಾಜ್ಯೋತ್ಸವ''

 ಬಂದಿತಿದೋ ಗಣರಾಜ್ಯೋತ್ಸವ
 ಭಾರತಾಂಬೆ ಮಡಿಲಿನ ನಿತ್ಯೋತ್ಸವ
 ಮೊಳಗುತಿರಲಿ ದೇಶಭಕ್ತಿಯ ಘೋಷಣ
ಮುಡಿಪಿರಲಿ ತಾಯ್ನೆಲಕೆ ಪ್ರಾಣ

""ಭವ್ಯ ಭಾರತ""

ಭವ್ಯ ಪರಂಪರೆಯ ನೆಲ ಭಾರತ
ಜನ್ಮಭೂಮಿ ನಮ್ಮದೆಂದು ನಮಿಸುತ
ಗಣರಾಜ್ಯೋತ್ಸವವ ಸಂಭ್ರಮಿಸುತ
ಒಂದಾಗೋಣ ಜಾತಿ ದ್ವೇಷವ ಮರೆಯುತ


"" *ಸಮ ಸಮಾಜ""* 

ಬನ್ನಿ ಸಮ ಸಮಾಜವ ಕಟ್ಟೋಣ
ಜಾತಿ ಧರ್ಮದ ಕಳೆಯ ಕೀಳೋಣ
ಭಾರತಾಂಬೆ ಕುಡಿಗಳೆಂದು ಬೀಗೋಣ
ಭಾವೈಕ್ಯತೆಯನು ಜಗಕೆ ಸಾರೋಣ
ಪ್ರಜಾರಾಜ್ಯೋತ್ಸವವ ಆಚರಿಸೋಣ
ಸದಾ ತಾಯ್ನೆಲಕೆ ಮುಡಿಪಿರಲಿ ಪ್ರಾಣ...
 
 ಮಧುಮಾಲತಿ ರುದ್ರೇಶ್ ಬೇಲೂರು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...