ಶನಿವಾರ, ಜನವರಿ 25, 2025

ಗಣರಾಜ್ಯೋತ್ಸವ...

"ಗಣರಾಜ್ಯೋತ್ಸವ''

 ಬಂದಿತಿದೋ ಗಣರಾಜ್ಯೋತ್ಸವ
 ಭಾರತಾಂಬೆ ಮಡಿಲಿನ ನಿತ್ಯೋತ್ಸವ
 ಮೊಳಗುತಿರಲಿ ದೇಶಭಕ್ತಿಯ ಘೋಷಣ
ಮುಡಿಪಿರಲಿ ತಾಯ್ನೆಲಕೆ ಪ್ರಾಣ

""ಭವ್ಯ ಭಾರತ""

ಭವ್ಯ ಪರಂಪರೆಯ ನೆಲ ಭಾರತ
ಜನ್ಮಭೂಮಿ ನಮ್ಮದೆಂದು ನಮಿಸುತ
ಗಣರಾಜ್ಯೋತ್ಸವವ ಸಂಭ್ರಮಿಸುತ
ಒಂದಾಗೋಣ ಜಾತಿ ದ್ವೇಷವ ಮರೆಯುತ


"" *ಸಮ ಸಮಾಜ""* 

ಬನ್ನಿ ಸಮ ಸಮಾಜವ ಕಟ್ಟೋಣ
ಜಾತಿ ಧರ್ಮದ ಕಳೆಯ ಕೀಳೋಣ
ಭಾರತಾಂಬೆ ಕುಡಿಗಳೆಂದು ಬೀಗೋಣ
ಭಾವೈಕ್ಯತೆಯನು ಜಗಕೆ ಸಾರೋಣ
ಪ್ರಜಾರಾಜ್ಯೋತ್ಸವವ ಆಚರಿಸೋಣ
ಸದಾ ತಾಯ್ನೆಲಕೆ ಮುಡಿಪಿರಲಿ ಪ್ರಾಣ...
 
 ಮಧುಮಾಲತಿ ರುದ್ರೇಶ್ ಬೇಲೂರು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...