ಬುಧವಾರ, ಆಗಸ್ಟ್ 13, 2025

ಕವಿತೆ...

ಅದೇಕೋ ಬಾನಿನ ಬೆಳಕು ಕಾಣೆಯಾಗಿತ್ತು ಸೂರ್ಯ ಮೋಡದ ಮುಸುಕಿನಲ್ಲಿ ಎಲ್ಲೋ ಮಾಯವಾಗಿದ್ದ ಕಪ್ಪು ಮೋಡ ದಟ್ಟಣೆ ಆವರಿಸಿತ್ತು ಪ್ರಕೃತಿಯೇ ಮಬ್ಬಾಗಿ 
ಕಳೆಗುಂದಿತ್ತು ತಂಪು ತಂಗಾಳಿ ಏಕೋ ಜೋರಾಗಿತ್ತು ಧರೆಯ ಬಿಸಿಗೆ ತಂಪೇರೆಯಲು ಅಂಬರ ಸಜ್ಜಾಗಿತ್ತು ನೀಲಿ ಗಗನದಿ ಬಿತ್ತೊಂದು ಹನಿ ಭೂಮಿತಾಗಿ ಮಣ್ಣು ಕಂಪು ಸೋಸಿತು ಆ ಮಧುರ ವಾಸನೆ ಹೇಳಿತು ಮಳೆಗಾಲ ಆರಂಭದ ಮುನ್ಸೂಚನೆ ಇದು ವಾತವರಣ ಬದಲಾಗಿ ತಂಪಾಯ್ತು ಭುವಿ ಮಳೆಗಾಲದ ಸಮಯದಲ್ಲಿ
ಕವಿದ ಮೊಡವ ಸರಿಸಿ ತೇಲಿ ಬಂದ ತಂಗಾಳಿ
 ಧರೆಗೆ ಕಾವ ತಣಿಸಿ 
 ಜೀವ ಸಂಕುಲದ ಉಸಿರಾಗಿ ಶುರುವಾದ ಮುಂಗಾರು
 ಹಸಿರಿಗೆ ಜೀವವಾಗಿ ಹೂ ದುಂಬಿಗೆ ಸಂತಸವಾಗಿ ಮನಕೆ ತಂಪಾಗಿ ಬೀಸಿದೆ.

           ಮಾನಸ ಜೀವನ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...