ಶುಕ್ರವಾರ, ಆಗಸ್ಟ್ 15, 2025

ಕವಿತೆ...

ಅಕ್ಷರ ಪೋಣಿಸಿ
ಪದ ಸೇರಿಸಿ
ಕೂಗಿ ಕರೆದು
ನಾನೇ ನಿನ್ನ  
ಹೆಚ್ಚು ಪ್ರೀತಿಸುವೆ
ಎಂದು ಹೇಳಿ 
ಬೀಗುವಷ್ಟರಲಿ;

ಮಾತಿಲ್ಲದೆ 
ಕಥೆಯಿಲ್ಲದೆ
ನಿನ್ನೆದೆಯೆ
ರಾಶಿ ರಾಶಿ ಒಲವನು
ಕಣ್ಣಲೆ ತೋರಿಸಿ,
ಬೀಗಲು ಬಂದ 
ನನ್ನನು ಬಾಗಿಸಿದ
ನಿನ್ನ ಪ್ರೇಮಪರಿಗೆ 
ನಾ ಬೆರಗಾಗಿ ಹೋದೆ!

ನೀ ಬರುವ ಮೊದಲು
ಒಲವೆಂದರೆ.,....
ನನದೊಂದು
ಕಲ್ಪನೆ ಇತ್ತು;
ಅದು ಎಲ್ಲೆ 
ಇರದ ಬಯಲು,
ಆ ಬಯಲಲಿ 
ಹಚ್ಚ ಹಸಿರು,
ಆ ಹಸಿರಲಿ  
ಹೂರಾಶಿ! 
ಇದುವೇ ಒಲವೆಂದು
ನನ್ನೀ ಮನ ಆಗಾಗ
ನಲಿದಾಡುತಲಿತ್ತು!

ಆದರೆ ಈಗ....
ನೀನೆ ಆ ಬಯಲು!
ನೀನೆ ಆ ಹಚ್ಚಹಸಿರು!
ನೀನೇ ಆ ಹೂರಾಶಿ!
ಒಲವೆಂದರೆ ನೀನೆಯಾಗಿಹೆ!

ಡಿ.ಶಬ್ರಿನಾ ಮಹಮದ್ ಅಲಿ
ಚಳ್ಳಕೆರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...