ಬಿಸಿಲು-ಮಳೆಗಂಜದ ಕಾಯಕಯೋಗಿ ಇವನು..
ಕಗ್ಗಲ್ಲನ್ನು ಕಡೆದು ಶಿಲ್ಪವಾಗಿ ಸುವವನು...
ಶಿಲೆಯಲ್ಲಿ ಸುಂದರ ಕಲೆಯರಳಿಸುವವನು...
ಕಲೆಯಿಂದ ಶಿಲೆಗೊಂದು ಜೀವ ತುಂಬುವವನು...
ಸಾವಿರ ಉಳಿಪೆಟ್ಟು ತಿಂದರೆ ತಾನೆ ಮೂರ್ತಿ...
ಸುಂದರ ಶಿಲ್ಪವಾಗಿ ಬದುಕಿಗಾಗುವುದು ಸ್ಪೂರ್ತಿ..
ಕಗ್ಗಲ್ಲೆಂದು ತಾನೆಂದು ಕೈಕಟ್ಟಿ ಕುಳಿತಿರದೆ...
ಶ್ರಮಿಸುವನು ಶಿಲೆಗಾಗಿ ಹಗಲಿರುಳೆನ್ನದೆ...
ಒರಟು ಶಿಲೆಗೆ ತನ್ನ ಕಲ್ಪನೆಯ ಆಕಾರವನೀವ…
ಆರಳಿದ ಮೂರ್ತಿಗೆ ತಾನೇ ಭಕ್ತಿಯಲ್ಲಿ ಕೈಮುಗಿವ...
ಗುರುವಿಗೂ ಶಿಲ್ಪಿಗೂ ಇರುವುದೊಂದೇ ಸಾಮ್ಯತೆ..
ಕಲ್ಲನ್ನೂ, ಕಲ್ಲು ಮನಸನ್ನೂ ತೀಡಿದೆನೆಂದ ಧನ್ಯತೆ...
ಗುರುವಿನೊಳ ಶಿಲ್ಪಿಗೆ, ಶಿಲ್ಪಿಯೊಳ ಗುರುವಿಗೆ..
ವಂದಿಪೆನು ನಾ ಇಬ್ಬರೂ ಬಾಳ ಬೆಳಗುವ ದೀವಿಗೆ..
ರಚನೆ :
ಶ್ರೀಮತಿ ಮಧುಮಾಲತಿ ರುದ್ರೇಶ್ ಬೇಲೂರು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ