ಸೋಮವಾರ, ಜೂನ್ 28, 2021

ಕನಕ ಗೀತೆ (ಕವಿತೆ) - ಅಂಬರೀಶ್ ನಾಯ್ಕೋಡಿ

ಕನಕ ಗೀತೆ.

ಕಾಗಿನೆಲೆಯಲ್ಲಿ ಜನಿಸಿದ ಪುಣ್ಯಾತ್ಮ,
ಕೀರ್ತನೆಗಳ ಮೂಲಕ ಜಗವ ಉದ್ಧರಿಸಿದ ಮಹಾತ್ಮ, 
ಕನಕ ಎಂದು ಹೆಸರಾಯಿತು ಇವರ ಆತ್ಮ,
ಮೇಲೆ ಕುಳಿತು ನೋಡುತ್ತಿದ್ದ ಪರಮಾತ್ಮ,

ಕನಕನ ಕಿಂಡಿಯಲ್ಲಿ ಕುಳಿತು ಮಾಡಿದರು ಧ್ಯಾನವ,
ಇದನ್ನು ಕಂಡು ಜನರು ನೀಡಿದರೂ ಗೌರವ,
ಪರಮಾತ್ಮನ ಕುರಿತು ಮಾಡಿದರು ಸ್ಮರಣೆ,
ಶಿವನು ಓಗೊಟ್ಟು ಬಂದನು ಅವನಿಗೆ ಎಂತಹ ಕರುಣೆ.

ಆಸೆಗಳಿಲ್ಲದ ಸಂತ,
ಜಗದ ಎದುರು ನಿಂತ ಜೀವಂತ,
ಜಗಕ್ಕೆ ಹೇಳಿದನು ಸಂಸ್ಕಾರ,
ಕೀರ್ತನೆಗಳ ಸರದಾರ,
ಇವರೇ ನಮ್ಮ ಕನಕದಾಸರ....! 

      - ಅಂಬರೀಶ್ ನಾಯ್ಕೋಡಿ...

ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ ವಿಜಯಪುರ..

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ಸಂಪಾದಕರು ವಿ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...