ಸೋಮವಾರ, ಜೂನ್ 28, 2021

ಕನಕ ಗೀತೆ (ಕವಿತೆ) - ಅಂಬರೀಶ್ ನಾಯ್ಕೋಡಿ

ಕನಕ ಗೀತೆ.

ಕಾಗಿನೆಲೆಯಲ್ಲಿ ಜನಿಸಿದ ಪುಣ್ಯಾತ್ಮ,
ಕೀರ್ತನೆಗಳ ಮೂಲಕ ಜಗವ ಉದ್ಧರಿಸಿದ ಮಹಾತ್ಮ, 
ಕನಕ ಎಂದು ಹೆಸರಾಯಿತು ಇವರ ಆತ್ಮ,
ಮೇಲೆ ಕುಳಿತು ನೋಡುತ್ತಿದ್ದ ಪರಮಾತ್ಮ,

ಕನಕನ ಕಿಂಡಿಯಲ್ಲಿ ಕುಳಿತು ಮಾಡಿದರು ಧ್ಯಾನವ,
ಇದನ್ನು ಕಂಡು ಜನರು ನೀಡಿದರೂ ಗೌರವ,
ಪರಮಾತ್ಮನ ಕುರಿತು ಮಾಡಿದರು ಸ್ಮರಣೆ,
ಶಿವನು ಓಗೊಟ್ಟು ಬಂದನು ಅವನಿಗೆ ಎಂತಹ ಕರುಣೆ.

ಆಸೆಗಳಿಲ್ಲದ ಸಂತ,
ಜಗದ ಎದುರು ನಿಂತ ಜೀವಂತ,
ಜಗಕ್ಕೆ ಹೇಳಿದನು ಸಂಸ್ಕಾರ,
ಕೀರ್ತನೆಗಳ ಸರದಾರ,
ಇವರೇ ನಮ್ಮ ಕನಕದಾಸರ....! 

      - ಅಂಬರೀಶ್ ನಾಯ್ಕೋಡಿ...

ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ ವಿಜಯಪುರ..

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ಸಂಪಾದಕರು ವಿ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...