ಗಜಲ್
ಪದೆ ಪದೇ ನೆನಪಾಗುತ ಸಾಗಿದೆ ಈ
ಬದುಕು ಒಮ್ಮೆ ಬಂದು ಬಿಡು ಗೆಳೆಯ
ಪ್ರೀತಿಯೊಲವ ಅಕ್ಷಯ ಪಾತ್ರೆ ಹಿಡಿದು
ಕಾಡಿರುವೆ ನೀ ಬಂದು ಬಿಡು ಗೆಳೆಯ
ನಿನ್ನೆದೆ ಬಾನಿನಂಗಳವು ನಿಲುಕದಾಗಿದೆ
ಇಲ್ಲಿ ಮೋಡಕವಿದ ಕತ್ತಲು
ಕವಿದ ಕಾರ್ಮೋಡದಲಿ ಬೀಜ ಮೊಳೆಹಿಸೆ
ಭುವಿಗೆ ಬಂದು ಬಿಡು ಗೆಳೆಯ
ಉಕ್ಕಿ ಹರಿಯುವ ಅಕ್ಷಯ ಪಾತ್ರೇಯಲಿ
ಒಲವಿನಮೃತ ತುಂಬಿ ಹೆಪ್ಪುಗಟ್ಟುತ
ಭಗ್ನವಾಗಿದೆ ಬದುಕು ಬವಣೆಯ ದಾರಿ
ದೂರ ಕ್ರಮಿಸಿ ಬಂದು ಬಿಡು ಗೆಳೆಯ
ಕನಿಕರವಿರದ ಕಾವಿನಲಿ ಕನಲಿ ನರಳಿ
ಮಸಣ ಮರುಗುತಿದೆ ತಾನೆ
ಸುಂಕ ಸುಲಿಗೆ ನೆರೆಹೊರೆಯು ; ಆತ್ಮ
ರಕ್ಷೆಗೆ ಬೇಡಿ ಬಂದು ಬಿಡು ಗೆಳೆಯ
ನನಗಾಗಿ ತೋಡಿದ ಹಗಲ ಬಾವಿಯ
ಮಣ್ಣು ಕಾಣದಾಗಿದೆ ಇರುಳಿಗೆ
ಬಂಧನಗಳ ಬಳಲಿಕೆಗೆ ಹೆಣ್ಣು ಜನ್ಮದ
ಮಿತ್ರನಾಗಿ ಬಂದು ಬಿಡು ಗೆಳೆಯ
ಆರ್ ಶೈಲಜಾ ಬಾಬು ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಚಿತ್ರದುರ್ಗ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ