ಮಂಗಳವಾರ, ಜೂನ್ 29, 2021

ಶಾಲೆ ತೆರೆಯುವ ಬಯಕೆ (ಕವಿತೆ) - ಆನಂದಜಲ.

*ಶಾಲೆಯ ತೆರೆಯುವ ಬಯಕೆ*

ಬಿಕೋ ಎನುತಿವೆ ನಮ್ಮ ಶಾಲಾ ಅಂಗಳಗಳು
ಭಣಭಣಗುಡುತಿವೆ ಮಕ್ಕಳಿಲ್ಲದ ಕೊಠಡಿಗಳು
ಉರುಳಿಹೋದವು ಎರಡು ವರುಷಗಳು
ಶಾಲೆಯ ಬಾಗಿಲ ತೆರೆಯದ ಬಾಳು||

ಮಾಸಿದ ಗೋಡೆಯ ನಿಶ್ಶಬ್ಧದ ಅಲೆಯು
ಹಾಸಿದೆ ಅಲ್ಲೆಲ್ಲಾ ಜೇಡರ ಬಲೆಯು
ಕೈತೋಟ ಗಿಡದಿ ಹೂಗಳು ಅಳುತಿವೆ
ಮಕ್ಕಳ ಕಿಲಕಿಲ ನಗುವಿಲ್ಲದೆ ಕೊರಗಿವೆ||

ಎರಡನೆ ಅಲೆ ಕೊರೋನಾ ಕಾರುಬಾರು
ಬಯಭೀತಿಯಲಿ ನಮ್ಮ ಪೋಷಕರು
ಪರೀಕ್ಷೆ ನಡೆಸಲು ಎಡರುತೊಡರು
ಆಗಲೇ ಮೂರನೆ ಅಲೆಯ ಗೊಂದಲ ಶುರು||

 ಗುರುಗಳು ಕಾದಿಹರು ಕಲಿಸಲು
ಪ್ರೀತಿಯ ಮಕ್ಕಳ ಎದುರುಗೊಳ್ಳಲು
ಪರ್ಯಾಯಯೋಜನೆ ಸಿದ್ಧತೆಗೊಳ್ಳಲು
ಇಲಾಖೆ ಕಾದಿದೆ ಶಾಲೆಯ ತೆರೆಯಲು||

       ಆನಂದಜಲ,ಶಿಕ್ಷಕಿ.
           ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ತುರುವೇಕೆರೆ.

(ನಿಮ್ಮ ಬರಹಗಳ ಪ್ರಕಟಣೆಗೆ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...