ಚಿಂತೆ ಚಿತೆಗೆ ದಾರಿ
ಚಿಂತೆಯಿಂದ ಚಿತೆ ಏರಬೇಡ
ಕೋಪ ದ್ವೇಷ ಚೆಟ್ಟ ಕಟ್ಟಬೇಡ
ಶಾಂತಿಯಿಂದ ಬಾಳಲೆಬೇಕಣ್ಣ
ಈ ಜೀವನವನ್ನು ಹೂವಂತೆ ಕಾಣಣ್ಣ
ದಿನವು ಟೆಂಕ್ಷನ್ ಮಾಡ್ಕೋ ಬೇಡಿ
ಜೀವನ ಹಾಳು ಮಾಡ್ಕೊಬೇಡಿ
ಕೆಲವೇ ದಿನಗಳು ಜೀವನ ನೋಡಿ
ಬೇಕಾಗಿ ಜೀವವ ಕಳಕೊಳ್ಳಬೇಡಿ
ಸಿಡಿಕು ಮುಸಿನು ಕೋಪಗಳೆಲ್ಲ ಬೇಡ....
ಕ್ಷಣಕ್ಷಣಕ್ಕೂ ಉದ್ವೇಗ ಮನಸ್ಸಿಗೆ ಬೇಡ
ನೂರು ನೋವುಗಳಿರಲಿ ಶಾಂತಿ ತುಂಬಿರಲಿ
ನೂರಾರು ಚಿಂತೆ ಬೇಡ ಸಮಾಧಾನವಿರಲಿ
ಯಾವುದು ಕ್ಷಣದಲಿ ಹೋಗುವುದಿಲ್ಲ
ಜೀವನದಲ್ಲಿ ಎಲ್ಲವನ್ನು ಅನುಭವಿಸಬೇಕಲ್ಲ
ಹೆಂಡತಿ ಬೇಕು ಮಕ್ಕಳು ಬೇಕು ಆಸರೆಗೆ
ಎಲ್ಲರ ಜೊತೆಯಲಿ ಹರುಷವಿರಲಿ ಜೊತೆಜೊತೆಗೆ
ಆರೋಗ್ಯ ನಮ್ಮ ದೇಹಕ್ಕೆ ಭಾಗ್ಯ ಅಲ್ಲವೇ
ದುಡಿದು ತಿನ್ನುವನಿಗೆ ರೋಗ ಬರುವುದಿಲ್ಲವೇ
ಎಲ್ಲವು ಸಹಿಸಬೇಕು ಎಲ್ಲರೂ ಕೂಡಿರಬೇಕು
ಕಷ್ಟ ಸುಖವು ಬಂದೆಬರುವುದು ತಡೆಯಬೇಕು
ದೈನಂದಿನ ಶ್ರಮಿಸಿದವನಿಗೆ ಆರೋಗ್ಯವು
ಸೋಮಾರಿತನ ಇದ್ದವನಿಗೆ ಬರುವುದು ರೋಗವು
ದುಡಿದು ತಿನ್ನವನಿಗೆ ನೋವಿನ ಅರಿವು ಉಂಟು
ತಾಳ್ಮೆಯೆ ಜೀವನಕ್ಕೆ ಔಷಧಿ ಮನುಜನ ನಂಟು
ಆರೋಗ್ಯ ಬಹಳ ಅತ್ಯಮೂಲ್ಯವಾದದ್ದು
ಯೋಚೆನೆ ಕೈಯಿಗೆ ಜೀವ ಕೊಡಬೇಡಿ
ಮನೆಯಲ್ಲಿ ನೂರೆಂಟು ಕಷ್ಟಗಳಿದ್ದರು ಇರಲಿ
ಶಾಂತಿ ನೆಮ್ಮದಿಗೆ ಹೆಚ್ಚು ಆದ್ಯತೆ ಇರಲಿ
ಜಿ ಟಿ ಆರ್ ದುರ್ಗ
ಬಂಗಾರಪೇಟೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ