ಮಂಗಳವಾರ, ಜೂನ್ 29, 2021

ಹಕ್ಕಿ ಮತ್ತು ಮರಿ (ಸಣ್ಣ ಕತೆ) - ರಾಕೇಶ್ ವಿ ಪತ್ತಾರ.


ಹಕ್ಕಿ ಮತ್ತು ಮರಿ 

ಒಂದೂರಲ್ಲಿ ಹಕ್ಕಿಯೊಂದು ತನ್ನ ಸುಂದರವಾದ ಗೂಡಿನೊಳಗೆ ವಾಸವಾಗಿತ್ತು. ಆ ಹಕ್ಕಿಯು ತನ್ನ ಗೂಡನ್ನು ಯಾರ ಕೈಗೂ ಸಿಗಲಾರದಷ್ಟು ಒಂದು ಮನೆಯ ಮಹಡಿ ಮೇಲೆ ಕಟ್ಟಿತ್ತು. ಹಕ್ಕಿಗೆ ಮೂರು ಮರಿಗಳಿದ್ದವು ಆದರೆ ಆ ಹಕ್ಕಿಗೆ ತನ್ನ ಮೊದಲೆರಡು ಮರಿಗಳೆಂದರೆ ತುಂಬಾನೇ ಇಷ್ಟವೋ ಇಷ್ಟ ಆದರೆ ಮೂರನೆಯ ಮರಿಗೆ ಅಷ್ಟೊಂದು ಇಷ್ಟಪಡುತ್ತಿರಲಿಲ್ಲ. ಹಕ್ಕಿಯು ಆಹಾರ ಹುಡುಕಿಕೊಂಡು ತನ್ನ ಮೊದಲೆರಡು ಮರಿಗಳಿಗೆ ಆಹಾರವನ್ನು ಹೆಚ್ಚು ಕೊಡುತ್ತಿತ್ತು ಆದರೆ ಆ  ಮೂರನೆಯ ಮರಿಗೆ ಸ್ವಲ್ಪ ಕೊಡುತ್ತಿತ್ತು ಹಾಗೆ ಅದರ ಬಗ್ಗೆ ಅಷ್ಟೊಂದು ಕಾಳಜಿ ತೋರಿಸುತ್ತಿರಲಿಲ್ಲ. ಒಂದು ದಿವಸ ಆ  ಹಕ್ಕಿಯು ಮೂರನೇ ಮರಿಗೆ , "ನಿನಗೆ ಬೇರೆ ಕಡೆ ವಾಸಿಸಲು ಸ್ಥಳವನ್ನು ಹುಡುಕಿರುವೆ, ಆದಷ್ಟು ನಾಳೆಯೇ ನಿನ್ನನ್ನು ಆ  ಸ್ಥಳಕ್ಕೆ ಬಿಟ್ಟು ಬರುವೆ " ಎಂದು ಹೇಳಿತು. ಇದನ್ನು ಕೇಳಿದ ಆ ಮೂರನೆಯ ಮರಿಗೆ ಸಿಡಿಲು ಬಡಿದಂತಾಯಿತು ಮತ್ತು ಆ ಮೂರನೆಯ ಮರಿಯು ಮನನೊಂದು ತನ್ನ ಮನಸ್ಸಿನಲ್ಲಿಯೇ," ನಾನು ಹುಟ್ಟಿದ್ದು ದುರಾದೃಷ್ಟ, ನನ್ನಿಂದ ಈ ಗೂಡಿನ ಮರಿಗಳಿಗೆ ಮತ್ತು ಹಕ್ಕಿಗೆ ತುಂಬಾ ತೊಂದರೆಯಾಗುತ್ತಿದೆ" ಅಂಥ ಹೇಳಿಕೊಂಡಿತು.ನಂತರ ಆ ಮನನೊಂದ ಮರಿಯು ತಟ್ಟನೆ ಆ ಗೂಡಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿತು.
-ಈ ಕಥೆಯನ್ನು ಕೇಳಿದ ನಂತರ ಓದುಗರಲ್ಲಿ ಒಂದು ಪ್ರಶ್ನೆ ಮೂಡಿರಬಹುದು ಅದೇನೆಂದರೆ ಹಕ್ಕಿಯು ಮೂರನೆಯ ಮರಿಗೆ ಯಾಕೆ ಪ್ರೀತಿ, ಮಮತೆಯನ್ನು ತೋರುತ್ತಿರಲಿಲ್ಲ? ಯಾಕೆಂದರೆ ಆ  ಮೂರನೆಯ ಮರಿಯು ಆ ಹಕ್ಕಿಯ ಸ್ವಂತ ಮರಿಯಾಗಿರುವುದಿಲ್ಲ ಮತ್ತು ಒಮ್ಮೆ ಆ  ಹಕ್ಕಿಯು ಸಂಚರಿಸುತ್ತಿರುವಾಗ ಕೆಳಗೆ ಒಂದು ಹಕ್ಕಿ ಮರಿಯು ಗಾಯಗೊಂಡು ಬಿದ್ದಿತ್ತಂತೆ ,ಅದನ್ನು ನೋಡಿದ ಈ ಹಕ್ಕಿಯು ಕನಿಕರದಿಂದ ಈ ಮರಿಯನ್ನು ಎತ್ತಿಕೊಂಡು ತನ್ನ ಗೂಡಿಗೆ ತಂದು ಬಿಟ್ಟಿತ್ತು.ಆ  ಗಾಯಗೊಂಡ ಮರಿಯೇ ಮೂರನೆಯ ಮರಿ. ಮಕ್ಕಳಿಗೆ ತಾಯಿ ಹೇಗೆ ಆಶ್ರಯ ಕೊಟ್ಟು ಸಲಹುತ್ತಾಳೋ,ಹಾಗೆ ಹಕ್ಕಿಗಳಿಗೆ ಗೂಡು ಆಶ್ರಯ ಕೊಟ್ಟು ಸಲಹುತ್ತದೆ.

: - ರಾಕೇಶ. ವಿ. ಪತ್ತಾರ, ಐಕೂರ. 10ನೇ ತರಗತಿ, ಆದರ್ಶ ವಿದ್ಯಾಲಯ ಶಹಾಪುರ, ಯಾದಗಿರಿ ಜಿಲ್ಲೆ.*


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...