ಮಂಗಳವಾರ, ಜೂನ್ 29, 2021

ಕಂದನ ಕನಲು (ಶಿಶುಗೀತೆ) - ಕಮಲಮ್ಮ.

ಒಂದು ಶಿಶುಗೀತೆ
* ಕಂದನ ಕನಲು*


ಅಮ್ಮ ಕೊಟ್ಟಳು ಉಪ್ಪಿಟ್ಟು
ನಂಗೆ ತಿನ್ನಲು ಬೇಕಿತ್ತು ನಿಪ್ಪಟ್ಟು
ನಾನಿರೋದೇ ಈಟೇ ಈಟು
ಡಬ್ಬ ಕ್ಯೆಗೆ ಸಿಗೋದೇ ದೌಟು!

ಅಪ್ಪ ತಂದಿತ್ತು ಚಾಕಲೇಟು
ಅಮ್ಮ ಕೊಡಲ್ಲಾ ತೆಗೆದಿಟ್ಟು
ನನ್ಹಲ್ಲು ಹುಳ್ಕ ಎಂದ್ಬಿಟ್ಟು
ನೆಗೆದೆ ಕೆಂಪನೆ ಸ್ಟೂಲ್ ಹತ್ಬಿಟ್ಟು

ಮುರ್ದ ಸ್ಟೂಲ್ ಧಡಾರ್ ಅಂತು
ಪ್ಲಾಸ್ಟಿಕ್ ತುಂಡು ಚೆಲ್ಲೋಯ್ತು
ಪಾತ್ರೆಯೊಳಗ್ನ ಹಾಲು ಉರುಳಿತ್ತು
ಕಾಮಿ ಬಂತು ಪೂರಾ ನೆಕ್ಯಂತು

ಅಮ್ಮ ಅಡಿಗೆ ಮನೀಗ್ಬಂತು
ಕಾಮಿ ಮ್ಯಾವ್ ಮ್ಯಾವ್ ಅಂತಿತ್ತು
ಅಮ್ಮನ ಕಣ್ಣು ಕೆಂಪಾಯ್ತು
ಕೋಲಿಂದ ಕಾಮಿಗೆ ಹೊಡೀತು!

ಅಪ್ಪ ನನ್ಹತ್ರ ನನ್ಹತ್ರ ಬಂದ್ಕೂತು
ಉಂಡಿ ನಿಪ್ಪಟ್ಟು ಬಾಯ್ಗೆ ತುರುಕಿತ್ತು
ಚಾಕಲೇಟ್ ಬಾರ್ ಜೇಬಿಗೆ ಇಟ್ಟಿತ್ತು
ಅಮ್ಮನ ಕೋಪ ಕೆರಳಿತ್ತು!

ಅಮ್ಮ ಮೊಬೈಲ್ ಕೊಟ್ಟಿತ್ತು
ಗೇಮ್ ಆಡೋದ್ನ ನೋಡ್ಬಿಡ್ತು
ಮೂಲೆಬೆತ್ತ ತಂದು ಬಾರಿಸ್ತು!
ಕ್ಲಾಸಷ್ಟೇ ನೋಡೋ ಮನಸಾಯ್ತು!
ಕಮಲಮ್ಮ ಬೆಂಗಳೂರು
೫೭೦/೨೫ ಮೊದಲನೇ ಹಂತ
ಎರಡನೆ ಅಡ್ಡರಸ್ತೆ 
ಶಿವಕುಮಾರಸ್ವಾಮಿ ನಗರ
ದಾವಣಗೆರೆ ೫೭೭೦೦೫.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...