ಸೋಮವಾರ, ಜೂನ್ 28, 2021

ಕರೋನಾ ಬಂದ್ರೆ ಡೇಂಜರಪ್ಪೊ (ಕರೋನಾ ಜಾಗೃತಿ ಕವಿತೆ) - ಶ್ರೀ ಕೆ ಎನ್ ಅಕ್ರಂಪಾಷ.

*ಕೊರೋನಾ ಬಂದ್ರೆ ಡೇಂಜರಪ್ಪೊ*


ಕೊರೋನಾ ಬಂದ್ರೆ ಡೇಂಜರಪ್ಪೊ
ಹುಷಾರಾಗಿರಪ್ಪೊ....
ಮಾಸ್ಕ್ ಇಲ್ಲದೆ ಹೊರಗಡೆ ಹೋದ್ರೆ ..
ಕೊರೋನಾ.. ಬರ್ತೈತಪ್ಪೊ..!!

ಕೊರೋನಾ.. ಓ.. ಕೊರೋನಾ.. 
ಕೊರೋನಾ.. ಓ.. ಕೊರೋನಾ!! 

ಕೊರೋನಾ ತಾಗಿದರೆ..
ಬದುಕೆ ಗೋವಿಂದ....

ಮಾಸ್ಕೂ ಹಾಕ್ಕೋ ಮಾಸ್ಕೂ
ಕೊರೋನಾದಿಂದಿಲ್ಲ ರಿಸ್ಕು..
ಅಂತರ ಪಾಲಿಸದಿದ್ರೆ..
ನಿನ್ನ ಜೀವನವೇ ಡಮ್ ಡಮ್ಮು!! 

ಹಾಕ್ಸೋಳ್ಳಿ ಹಾಕ್ಸೋಳ್ಳಿ
ಲಸಿಕೆ ಹಾಕಿಸಿಕೊಳ್ಳಿ
ಕೊರೋನಾದಿಂದ ತಪ್ಪಿಸಿಕೊಂಡು 
ನಿಮ್ಮ ಜೀವ ಉಳಿಸಿಕೊಳ್ಳಿ!!

ತಗೊಳ್ಳಿ ತಗೊಳ್ಳಿ 
ಬಿಸಿಬಿಸಿ ಆವಿಯನ್ನು..
ಮನೆಯಿಂದ ಹೊರಬರದೆ
ನಿಮ್ಮ ಪ್ರಾಣ ಉಳಿಸಿಕೊಳ್ಳಿ!!


ಕೊರೋನಾ ಬಂದ್ರೆ ಡೇಂಜರಪ್ಪೊ
ಹುಷಾರಾಗಿರಪ್ಪೊ....
ಎಚ್ಚರ ತಪ್ಪಿ ನಡೆದುಕೊಂಡರೆ
ಜೀವಾನೇ ಹೋಗ್ತೈತಪ್ಪೊ!! 

ಕೊರೋನಾ.. ಓ.. ಕೊರೋನಾ.. 
ಕೊರೋನಾ.. ಓ.. ಕೊರೋನಾ!! 

ಕೊರೋನಾ ತಾಗಿದರೆ..
ಬದುಕೆ ಗೋವಿಂದ....

ಮಾಸ್ಕು, ಸ್ಯಾನಿಟೈಜರ್ 
ಮರೆಯದೆ ಉಪಯೋಗಿಸಿ ನೀವು 
ನಿಯಮ ಪಾಲಿಸದಿದ್ರೆ
ಹುಡುಕೊಂಡು ಬರುತ್ತೆ ಸಾವು!!

ಕೊರೋನಾ ...ಕೊರೋನಾ..
ನಿಮ್ಮ ಹತ್ರ ಬಂದ್ರೆ 
ಖಂಡಿತ ಜನರಿಗೆ ಕಾದಿದೆ 
ನಿಮ್ಗೆ ಘೋರ ತೊಂದ್ರೆ!!

🌸🌸🌸🌸🌸

     *: ಕೆ ಎನ್ ಅಕ್ರಂಪಾಷ* 
ಯುವಸಾಹಿತಿ /ಶಿಕ್ಷಕರು
          ಚಿಂತಾಮಣಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ಸಂಪಾದಕರು ವಿ ಮ ಸಾ ಪತ್ರಿಕೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...