ಜನಪದ ಶೈಲಿ ಕವಿತೆ.
ತಂಪಾದ ತೊರೆ ಬಳಿ ಕಂಪನು ಸೂಸುತಾ
ಇಂಪಾದ ರಾಗ ಹಾಡಿವ್ನೀ||ನಿನಗಾಗಿ
ಸೊಂಪಾಗಿ ಬೆಳೆದು ನಿಂತೀವ್ನಿ||
ಬಾರಯ್ಯ ಜೊತೆಗಾರ ಹೊರಲಾರೆ ಬಂಗಾರ
ಪುರಸೊತ್ತು ಇಲ್ಲವೆ ನನಗಾಗಿ||ನನ್ನ ನಲ್ಲ
ಹೊರೆ ಹೂವ ಮುಡಿದು ಕುಂತೀವ್ನಿ||
ಎಷ್ಟೊತ್ತು ಕಾಯೋದು ಇಷ್ಟೆನಾ ನಿನ್ನ ಪ್ರೀತಿ
ಅಷ್ಟೈಶ್ವರ್ಯವ ನಾ ಒಲ್ಲೆ|| ನೀನಿದ್ದರೆ
ಕಷ್ಟವಿಲ್ಲದ ಬದುಕು ನನದಾಯ್ತು||
ಅಂದಾದ ನಲ್ಲನೇ ಚೆಂದಾದ ಮೊಗದವನೆ
ತಂದೀನಿ ನಿನಗಾಗಿ ಹೂಮಾಲೆ||ನನ್ನ ಒಲವೆ
ಬಂದು ಕೊರಳ ನೀಡಯ್ಯಾ||
ಹೊನ್ನರಾಶಿಯ ಮೇಲೆ ಚಿನ್ನದ ಅಂಬಾರಿ
ರನ್ನನಂತ ನನ್ನ ನಲ್ಲ ||ಬರುವಾಗ
ನನ್ನನ್ನೇ ಮರೆತು ನಾ ನಿಂತೇನಾ||
-ಆನಂದಜಲ,ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ತುರುವೇಕೆರೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ )
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ