ಭಾನುವಾರ, ಆಗಸ್ಟ್ 15, 2021

75ರ ಸಂಭ್ರಮದಲ್ಲಿ ಭಾರತ (ಕವಿತೆ) - ಶ್ರೀ ಶ್ರೀಧರ ಗಸ್ತಿ, ಧಾರವಾಡ.

75ರ ಸಂಭ್ರಮದಲ್ಲಿ ಭಾರತ

75 ರ ಸಂಭ್ರಮವಿದು ಮಾತೆ ನಿನಗಿದೋ ಅರ್ಪಣೆ
ಎಲ್ಲೆಲ್ಲೂ ಸ್ವಾತಂತ್ರ್ಯ ದಿನಾಚರಣೆಯ ಹಣತೆ
ಮಾತೆಯನು ವರ್ಣಿಸಲು ಅಸದಳವು ತಾಯೆ
ಆದರೂ
ಭಿನ್ನವಿಪೆ ದಶ ದಶಕಗಳ ಅಶ್ರುತರ್ಪಣ ದ ಕವಿತೆ

ಪ್ರಜೆಗಳೇ ಪ್ರಭುವೆಂದು ನಾಡಕಟ್ಟಿದೆವು
ಪ್ರಜೆಗಳೇ ಮಾಯವಾಗಿ ಮೆರೆಯುತಿಹರು
ಪ್ರಭುಗಳು
ಹಣ ಗಳಿಕೆಯ ಭರಾಟೆಯಲಿ ಕೊಂದಿಹನು
ಪ್ರಜೆಯ ಮತ ಮೌಲ್ಯ ಮೆರೆದಿಹನು ತಾನು
ಉತ್ತುಂಗದ ಶಿಖರದಲಿ ಮೌಢ್ಯ ಮೆರೆಯುತ
75ರ ಸಂಭ್ರಮಕೆ ಉಘೆ ಉಘೆ ಎನ್ನುತ

ರೈತನೇ ಬೆನ್ನೆಲುಬೆಂದು ಎಲುಬುಗಳ ಕಿತ್ತಾಡಿ
ಉಸಿರುಗಟ್ಟಿಸಿ ಹೇಸಿ ರಾಜಕಾರಣ ಮಾಡಿ
ಬಾಯಿಮಾತಲಿ ಬಣ್ಣ ಬಳಿಯುತ ಖೋಡಿ
ಬಾಚಿಹನು ಕೋಟಿ ಕೋಟಿ ನಿನ್ನ ಹೆಸರಲಿ
75ರ ಸಂಭ್ರಮದ ತೂಗುಯ್ಯಾಲೆಯಲಿ

ಹೆಸರಿಗೆ ಯೋಜನೆಗಳು ಆಗುತಿಲ್ಲ ಫಲಪ್ರದ
ಮುಟ್ಟುತಿಲ್ಲ ಬಡವರಿಗೆ ದಮನಿತರಿಗೆ ಕೂಲಿಕಾರ್ಮಿಕರಿಗೆ
ಗಟ್ಟಿಯಾಗಿ ಕೇಳಿದವನ ಹುಟ್ಟಡಗಿಸುವ
ಭಂಡ ದೊರೆಗಳ ದರ್ಪದ ಛಾಯೆ
75ರ ಸಂಭ್ರಮದಲಿ ನಿನಗಿದೋ ಅರ್ಪನೆ

ತೆಗ್ಗು ಬಿದ್ದ ರಸ್ತೆಗಳು ತೇಪೆ ಹಾಕಿದ ಗುಂಡಿಗಳು 
ಸೋರುತಿರುವ ಕಛೇರಿಯ ತೂತುಗಳು
ಮುಚ್ಚಲಾಗದ ಕಳಪೆ ಕಾಮಗಾರಿಗಳು
ತುಕ್ಕು ಹಿಡಿದ ಯಂತ್ರಗಳು,ದುರಾಸೆಯ ಕರಗಳು
75ರ ಸಂಭ್ರಮದಿ ನಿನಗಿದೊ ಮಾಲಾರ್ಪಣೆ

ಮರುಕಳಿಸಲಿ ಮತ್ತೊಮ್ಮೆ ಸ್ವಾತಂತ್ರ್ಯದ ಕಹಳೆ
ಹುಟ್ಟಡಗಿಸುತ ಒಳಗಿನವರ ಸ್ವಾರ್ಥ ಮನಸುಗಳ
ಪ್ರಜಾಪ್ರಭುತ್ವದ ನಿಜ ಮೌಲ್ಯವ ಎತ್ತಿ ಹಿಡಿಯುತ
ಬೆಳಗಲಿ ಬಡವರ ಬವಣೆಗಳ ಕಣ್ಣೀರಿನು ಒರೆಸುತ
ಆಚರಿಸಲಿ ಶತಕದ ಸಂಭ್ರಮ ಜೈ ಜೈ ಎನ್ನುತ
        
  ✍ ಶ್ರೀಧರ ಗಸ್ತಿ ಧಾರವಾಡ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...