ಬುಧವಾರ, ಸೆಪ್ಟೆಂಬರ್ 22, 2021

ಕಲ್ಪನೆಯ ಕವನ (ಕವಿತೆ) - ಸವಿತಾ ಆರ್ ಅಂಗಡಿ ಮುಧೋಳ.

ಕಲ್ಪನೆಯ ಕವನ

 ಕಲ್ಪನೆಯಿಂದ ಕವನ ಕಟ್ಟಿರುವೆ
 ಅನುಭವದಿಂದ ಚುಟುಕು ಬರೆದಿರುವೆ
 ವಿಚಾರಣೆ ಮಾಡಿ ಲೇಖನ ಬರೆದಿರುವೆ
 ನಡೆ-ನುಡಿ ಆಚಾರದಂತೆ ವಚನ ಕೇಳುವೆ
 ಹೃದಯ ಅಂತರದಿಂದ ರಾಗ ಹಾಡುವೆ
 ಜೀವಿಸಲು  ಉಸಿರಾಟ ಕೊಡು ಎಂದು ಮರವ ಕೇಳುವೆ
 ದಿನನಿತ್ಯ ಭಗವಂತನಲ್ಲಿ ಮೊರೆಹೋಗುವೆ
 ತುಂಬಿ ಹರಿಯುವ ನದಿಗಳು ಕಂಡು ಸಂತಸಗೊಳ್ಳುವೆ
 ಕೋಗಿಲೆಯ ದಾನ ಕೇಳಿ ಮಂಕಾಗುವೆ
 ನವಿಲಿನ ನರ್ತನ ನೋಡಿ ಬೆರಗಾಗುವೆ
 ಹೊತ್ತು ಹೆತ್ತು ಸಾಕಿದ ತಾಯಿಯ ಋಣವ ತೀರಿಸುವೆ
 ಗುರುಹಿರಿಯರ ಕಂಡಲ್ಲಿ ನಮಸ್ಕರಿಸುವೆ
 ದುಷ್ಟರ ಸಂಗ ತೆಜೆಸಿ ಸಜ್ಜನರ ಸಂಗಕ್ಕೆ ಕಾಯುವೆ
 ವಿದ್ಯಾದಾನ ನೀಡೆಂದು ಗುರು ವಲ್ಲಿ ಕೇಳುವೆ
 ದೇವರನಾಮವನ್ನು ಭಕ್ತಿಯಿಂದ ಭಜಿಸುವೆ
 ಹೇ ಬಗವಂತ ಸದಾ ನಿನ್ನ ಆಶ್ರಯದಲ್ಲಿರುವೆ
 ಎಲ್ಲರ ಬದುಕಲ್ಲಿ ಸುಖ ನೀಡೆಂದು ದೇವರ ಪ್ರಾರ್ಥಿಸುವೆ
 ಸದಾ ನಿನ್ನ ನಾಮವ ನೆನೆಯುವೆ


✍️ ಸವಿತಾ ಆರ್ ಅಂಗಡಿ  ಮುಧೋಳ.



( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ ) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...