ಬುಧವಾರ, ಸೆಪ್ಟೆಂಬರ್ 22, 2021

ಹೃದಯ ಮಿಡಿತ ( ಕವಿತೆ) - ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ.

ಹೃದಯ ಮಿಡಿತ

*ಹೃದಯ ಹೃದಯ ನೀನೇ ಸನಿಹ* 
*ಹೃದಯದ ಕದವ ತೆರೆಯೇ ನೇಹ ..//*
*ಮನಸಿಗಿಲ್ಲ ಬಣ್ಣ ಅಳಲು ಬೇಡ ಕರುಣ*
*ಅಂತರಂಗದೊಳಗೆ ಆವರಿಸಿದೆ ನೀನೇ ಅರುಣ..//ಹೃದಯ//*

*ಹಣಿತ ನೊಂದ ಹೃದಯವಿದು  ಹಂಬಲಿಸಿದೆ*
*ಮಮತೆಗಾಗಿ ಕಣ್ಣೀರ ಕೊಡಿ ಹರಿಸಿದೆ..*
*ಕದದ ಸನಿಹದಿ ಶಶಿಕಿರಣದಿ*
*ತಾರೆಗಳ ಸೊಬಗಿನ ಸುಮ ನಗುವಿದೆ..//ಹೃದಯ//*

*ಚಿಲಿಪಿಲಿ ಹಕ್ಕಿಪಕ್ಷಿಗಳ ಸ್ವರವಿದೆ*
*ಬೆಳ್ಮುಗಿಲ ಬೆಳ್ಳಕ್ಕಿಯ ಮುಗಿಲು ನಲಿದಿದೆ..*
*ಪ್ರಕೃತಿ ಮಾತೆಯ  ಸೊಬಗಿದೆ ಗಂಧ*
*ಓ ಮನವೇ,ಈ ಬಂಧವಾಗಲಿ ಅನುಬಂಧ..//ಹೃದಯ//*

*ವಸಂತ ಕೋಗಿಲೆ ಮತ್ತೆ ಹಾಡಲಿ*
*ಋತುಗಳು ನಿನ್ನ ಶ್ರುತಿ ಲಾಪಕಾಗಿ ಕಾದಿದೆ..*
*ಆಗಸದ ಗುಡುಗು ಮಿಂಚಲಿ ನಾದವಿದೆ*
*ಸುರಿವ ಹನಿಹನಿ ವರ್ಷಧಾರೆಯಲಿ ಸಾರವಿದೆ..//ಹೃದಯ//*

*ಅನುರಾಗದ ಲತೆಯಲಿ ಕುಸುಮವು ಅರಳಿದೆ*
*ಓ ಒಲವೇ,ನಾಕದ ಬಾಗಿಲು ತೆರೆದಿದೆ..*
*ಧರೆಗೆ ಇಬ್ಬನಿ ಕರಗಿ ಧಾರೆಯಾಗಿ ಹರಿದಿದೆ*
*ಓ ಒಲವೇ,ಹೃದಯ ಮಿಡಿತದಿ ನಲಿದಿದೆ..//ಹೃದಯ//*

- ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಅಡ್ವೈಸರ್ ಅಂಚೆ ಜೀವ ವಿಮೆ ಮಂಡ್ಯ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ ) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...