ಶುಕ್ರವಾರ, ಸೆಪ್ಟೆಂಬರ್ 24, 2021

ಸನ್ಮಾರ್ಗದ ಬೇರು ಕಹಿ, ಆದರೆ ಫಲಿತಾಂಶ ಸಿಹಿ (ಲೇಖನ) - ಕೀರ್ತಿ ಬಸವರಾಜ ಖೋಳಂಬಿ.

ಸನ್ಮಾರ್ಗದ ಬೇರು ಕಹಿ, ಆದರೆ ಫಲಿತಾಂಶ ಸಿಹಿ

       ಗೆಜ್ಜೆ ಬೆಲೆ ಸಾವಿರ ಸಾವಿರ ಇದ್ದರೂ ಹಾಕೋದು ಕಾಲಿಗೆ. ಕುಂಕುಮದ ಬೆಲೆ ಪೈಸೆಯಲ್ಲಿ. ಆದರೆ ಹಚ್ಚೋದು ಹಣೆಗೆ. ಬೆಲೆ ಮುಖ್ಯ ಇಲ್ಲ ಇಲ್ಲಿ ಕೃತಿ ಮುಖ್ಯ. ಉಪ್ಪಿನಂತೆ ಕಟು ಮಾತನಾಡುವವನು ನಿಜ ಸ್ನೇಹಿತ. ಸಕ್ಕರಂತಯೇ ಸಿಹಿ ಮಾತನಾಡುವವನು ನಯವಂಚಕ . ಅದಕ್ಕೆ ಉಪ್ಪಿನಲ್ಲಿ ಹುಳು ಬಿದ್ದ ಇತಿಹಾಸವಿಲ್ಲ.ಇತಿಹಾಸದಲ್ಲಿ  ಹುಳು ಬೀಳದ  ಸಿಹಿ ಇಲ್ಲ. ಕಾಣದ ದೇವರಿಗೆ ನಾವು ಹಾಲು, ನವಿದ್ಯಾ, ಪೂಜೆ-ಪುನಸ್ಕಾರಗಳು.ಹಸಿದ ಬಡವನಿಗೆ ಒಣ ರೊಟ್ಟಿ, ಹಳಸಿದ ಅನ್ನ, ಇದು ಎಂತಹ ಮಾನವೀಯತೆ  ಹೇ ಮಾನವ, 

ಈ ಜೀವನ ಅಷ್ಟೊಂದು ಒಳ್ಳೆಯದಲ್ಲ. ಜೀವನ ಒಳ್ಳೆಯದೇ ಆಗಿದ್ದರೆ ಈ ಮನುಷ್ಯ ಅಳುತ್ತಲೇ ಈ ಜಗತ್ತಿಗೆ ಬರುತ್ತಿರಲಿಲ್ಲ. ಮತ್ತು ಹೋಗುವಾಗ ಎಲ್ಲರನ್ನು ಅಳಸಿ ಹೋಗುತ್ತಿರಲಿಲ್ಲ. ಬಾ ಎಂದರು ಸನ್ಮಾರ್ಗದಲ್ಲಿ ಬರುವುದಿಲ್ಲ. ಯಾರು ಕರೆಯದಿದ್ದರೂ ಕೆಟ್ಟ ಮಾರ್ಗದಲ್ಲಿ ಎಲ್ಲರೂ ಬರುತ್ತಾರೆ. ಅದಕ್ಕೆ ಸಾರಾಯಿ ಮಾರುವವನ ಬಳಿ ಎಲ್ಲರೂ ಹೋಗುತ್ತಾರೆ, ಆದರೆ ಹಾಲು ಮಾರುವವನು ಬೀದಿ ಬೀದಿ ಅಲೆಯುತ್ತಾನೆ. ಹಾಲು ಮಾರುವವನಿಗೆ ಕೇಳುತ್ತಾರೆ ಹಾಲಿನಲ್ಲಿ ನೀರು ಬೆರೆಸಿದೆಯಂತಾ ದುಪ್ಪಟ್ಟ ಹಣ  ಕೊಟ್ಟು  ತೆಗೆದುಕೊಳ್ಳುತ್ತೇವೆ. ಸಾರಾಯಿಗೆ ನಾವೇ ನೀರು ಬೆರಸುತ್ತೇವೆ. ಈಗಿನ ಜೀವನದಲ್ಲಿ ಎಂತಹ  ಮಾನವೀಯತೆಯನ್ನು  ನಾವು ಕಾಣುತ್ತೇವೆ. 🙏🙏☺️☺️

- ಕೀರ್ತಿ ಬಸವರಾಜ ಖೋಳಂಬಿ
 ಪತ್ರಿಕೋದ್ಯಮ ವಿದ್ಯಾರ್ಥಿನಿ
ತಾಲೂಕು: ಅಥಣಿ 
ಜಿಲ್ಲಾ: ಬೆಳಗಾವಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...