ಭಾನುವಾರ, ಸೆಪ್ಟೆಂಬರ್ 26, 2021

ಕ್ಷಮಿಸಿ ಬಿಡು ಮನವೇ (ಕವಿತೆ) - ಎಸ್. ರಾಜುಕವಿ ಸೂಲೇನಹಳ್ಳಿ, ಕಾದಂಬರಿಕಾರರು.

  ಕ್ಷಮಿಸಿ ಬಿಡು ಮನವೇ

ವಸ್ತುಗಳು ಹಾಗೇ ಬಳಸಿಕೊಂಡವರ
ನಂಬಿಕೆಗೆ ದ್ರೋಹ ಬಗೆದವರ
ಅಗತ್ಯಕ್ಕೆ ತಕ್ಕಂತೆ ನಟಿಸುವರನ್ನ
ಪ್ರೀತಿ ಅರ್ಥ ಗೊತ್ತಿಲ್ಲದ ಮನುಜರನ್ನ

ಮಾನವೀಯ ಮೌಲ್ಯ ಮರೆತವರನ್ನ
ನೂರು ಉಪದೇಶ ಸಾರಿ ಪಾಲಿಸದವರನ್ನ
ವ್ಯಕ್ತಿತ್ವಕ್ಕೆ ಕುಂದು ತಂದವರನ್ನ
ಮೋಸದ ಅಸ್ತ್ರ ಪ್ರಯೋಗಸಿದವರನ್ನ

ಭವಿಷ್ಯದ ಕನಸಿಗೆ ಕೊಳ್ಳಿ ಇಟ್ಟವರನ್ನ
ನಿಸ್ವಾರ್ಥ ಮನಸ್ಸಿಗೆ ನೋವು ಮಾಡಿದವರನ್ನ
ಮಾರ್ಗ ಮಧ್ಯೆ ಗಾಳಿಗೆ ತೂರಿದವರನ್ನ
ಮರೆತು ಬಿಡು ಭಗವಂತ ಶಿಕ್ಷೆಯ ಕೊಟ್ಟಾನು

- ಎಸ್. ರಾಜುಕವಿ ಸೂಲೇನಹಳ್ಳಿ
ಕಾದಂಬರಿಕಾರ
ಮೊ:೯೭೪೧೫೬೬೩೧೩.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...